ಈ ಬಾರಿ ಅನಿಶ್ಚಿತತೆಯ ಮುಂಗಾರು ಮಳೆಯಿಂದಾಗಿ ರೈತರು ಮಳೆಗಾಗಿ ಸದಾ ಮೊರೆಯಿಡುವಂತಾಗಿತ್ತು. ಒಂದು ಗ್ರಾಮದಲ್ಲಿ ಮಳೆ ಬಿದ್ದರೆ, ಇನ್ನೊಂದು ಗ್ರಾಮದಲ್ಲಿ ಒಂದು ಹನಿ ಮಳೆ ಬೀಳುತ್ತಿರಲಿಲ್ಲ. ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಕೆರೆಕಟ್ಟೆಗಳು ಹಾಗೂ ಹಳ್ಳಕೊಳ್ಳಗಳಲ್ಲಿ ನೀರು ಹರಿದು ಹೋಗುವಷ್ಟು ಪ್ರಮಾಣದಲ್ಲಿ ಮಳೆ ಬಿದ್ದಿರುವುದಿಲ್ಲ. ಮಳೆ ಕೊರತೆಯಿಂದಾಗಿ ಬೆಳೆಗಳು ಬಾಡಿ ಹೋಗಲು ಆರಂಭಿಸಿದ್ದವು.