ನಗರದ ಬಸ್ ನಿಲ್ದಾಣ, ಜವಾಹರ್ ರಸ್ತೆ, ಹಳೆ ಮಾರುಕಟ್ಟೆ ಪ್ರದೇಶ, ಜಿಲ್ಲಾ ಕ್ರೀಡಾಂಗಣದ ಬಳಿ ಬೃಹತ್ ಪ್ರಮಾಣದಲ್ಲಿ ನೀರು ನಿಂತು ಕೃತಕ ಕರೆಯಂತೆ ಭಾಸವಾಯಿತು. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಚಂರಡಿಯ ನೀರು ರಸ್ತೆಗೆ ನುಗ್ಗಿದ್ದರಿಂದ ಚಂರಡಿಯಾವುದೋ, ರಸ್ತೆ ಯಾವುದೋ ಎನ್ನುವಂತಾಗಿತ್ತು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸಂಚರಿಸಲು ಹರಸಾಹಸ ಪಡಬೇಕಾಯಿತು.