ದೊಡ್ಡ ಅವಘಡ ಸಂಭವಿಸುವ ಮೊದಲು ಭೈರಪ್ಪನ ಬೆಟ್ಟಕ್ಕೆ ಮೆಟ್ಟಿಲು ಹಾಕಿಸುವ ಕಾಮಗಾರಿ ತತ್ವರಿತವಾಗಿ ಪೂರ್ಣಗೊಳಿಸಿ ಎಂದು ಹಲವು ಬಾರಿ ಪುರಸಭೆಗೆ ಮನವಿ ಮಾಡಿದರೂ, ಕ್ರಮ ಕೈಗೊಂಡಿಲ್ಲ. ಇನ್ನಾದರೂ ಉನ್ನತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಕಾಳಜಿ ವಹಿಸಿ ತಮ್ಮ ಹಿತ ಕಾಪಾಡಬೇಕು ಎಂಬುದು ಕೋಟೆ ಬಡಾವಣೆ ನಿವಾಸಿಗಳ ಮನವಿ.