ದೇಶದ ನೀರಿನ ಬವಣೆ, ಬರ ನೀಗಿಸುವ ಸಲುವಾಗಿ ರೂಪಿಸಿರುವ ನದಿ ಜೋಡಣೆ ಯೋಜನೆಗೆ ಈಗ ಮಹತ್ವ ಬಂದಿದೆ. ಈಶ ಪೌಂಡೇಷನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರು ಹೇಳುವಂತೆ, ಇನ್ನು 20–25 ವರ್ಷಗಳ ಬಳಿಕ ನೀರಿನ ಕೊರತೆ ತೀವ್ರಗೊಂಡು ಮಾನವನ ಜೀವನ ಅಸಹನೀಯವಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸದ್ಗುರು ಅವರು ‘ನದಿಗಳನ್ನು ಉಳಿಸಿ’ ಅಭಿಯಾನ ಆರಂಭಿಸಿದ್ದಾರೆ. ಇದು ಸ್ವಾಗತಾರ್ಹ.