ಅಮರ್ಜಾ ಅಣೆಕಟ್ಟೆಯ ಹಿನ್ನೀರು ಬರುವ ಗ್ರಾಮವಾದ ಜೀರಹಳ್ಳಿ, ಹೆಬಳಿ, ಪಡಸಾವಳಿ, ಖಾನಾಪುರ, ತೀರ್ಥ, ಖಜೂರಿ, ಸಾಲೇಗಾಂವ, ಚಿತಲಿ, ತಡೋಳಾ ಗ್ರಾಮದಲ್ಲಿ ಉತ್ತಮ ಮಳೆಯಾದ್ದರಿಂದ ಅಣೆಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿದೆ. ಹೆಬಳಿ, ಮಟಕಿ, ವಳವಂಡವಾಡಿ, ಮುನ್ನೋಳ್ಳಿ ಗ್ರಾಮದ ರಸ್ತೆಗಳು ಮಳೆಗೆ ಹಾನಿಯಾಗಿವೆ. ಇದರಿಂದ ಶುಕ್ರವಾರ ಕೆಲ ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತವಾಗಿತ್ತು.