ಕೆ.ಆರ್.ಪೇಟೆ: ತಾಲ್ಲೂಕಿನ ಚಿಕ್ಕೋನಹಳ್ಳಿಯ ಕೆರೆಯು ಭರ್ತಿಯಾದ ಕಾರಣ ಭಾನುವಾರ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣೇಗೌಡ ಸೇರಿ ಕೆರೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದರು.
ಕಳೆದ ಮೂರು ವರ್ಷಗಳಿಂದ ನೀರಿಲ್ಲದೇ ಬರಡಾಗಿದ್ದ ಚಿಕ್ಕೋನಹಳ್ಳಿ ಗ್ರಾಮದ ಕೆರೆಯು ನೂರಾರು ಎಕರೆ ಕೃಷಿಭೂಮಿಗೆ ನೀರೊದಗಿಸುತ್ತದೆ. ಇದು ಅಂತರ್ಜಲದ ಮರುಪೂರಣಕ್ಕೆ ವರದಾನವಾಗಿತ್ತು. ಆದರೆ ಬರಗಾಲದಿಂದಾಗಿ ಕೆರೆಯೇ ತುಂಬಿರಲಿಲ್ಲ.
ಈ ಬಾರಿ ಗೊರೂರು ಹೇಮಾವತಿ ಜಲಾಶಯದಿಂದ ನೀರು ತುಂಬಿಸುವ ಪ್ರಯತ್ನ ನಡೆಯಿತು. ಹೀಗಾಗಿ ಕೆರೆ ತುಂಬಿದ್ದು ಜನರು ಸಿಹಿ ಹಂಚಿ ಸಂಭ್ರಮಪಟ್ಟರು.
ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ರಾಮದಾಸ್, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣೇಗೌಡ ಹಾಜರಿದ್ದರು.