ಚೆನ್ನೈ: ಪಕ್ಷಾಂತರ ವಿರೋಧಿ ನಿಯಮದ ಅಡಿಯಲ್ಲಿ ತಮ್ಮನ್ನು ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಎಐಎಡಿಎಂಕೆಯ 18 ಬಂಡಾಯ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ನಡೆಸಲಿದೆ.
18 ಜನರ ಪರವಾಗಿ ಹಾಜರಾದ ವಕೀಲ ಪಿ.ಆರ್ ರಮಣ್ ಅವರು ನ್ಯಾಯಮೂರ್ತಿ ಎಂ. ದೊರೆಸ್ವಾಮಿ ಅವರ ಮುಂದೆ ಅರ್ಜಿದಾರರ ವಿಷಯವನ್ನು ಪ್ರಸ್ತಾಪಿಸಿದರು.
ತುರ್ತಾಗಿ ಅರ್ಜಿ ವಿಚಾರಣೆ ನಡೆಸಲು ಒಪ್ಪಿದ ನ್ಯಾಯಮೂರ್ತಿಗಳು, ಕ್ರಮಬದ್ಧವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ಪಳನಿಸ್ವಾಮಿ ಅವರಿಗೆ ನೀಡಿದ ಬೆಂಬಲವನ್ನು ವಾಪಸ್ ಪಡೆದದ್ದಕ್ಕಾಗಿ ಸಭಾಧ್ಯಕ್ಷ ಧನಪಾಲ್ 18 ಶಾಸಕರನ್ನು ಅನರ್ಹಗೊಳಿಸಿದ್ದರು.