‘ಈ ಸಂಬಂಧ ಪಾಲಿಕೆ ಸಭಾಂಗಣದಲ್ಲಿ ವಲಯ ಜಂಟಿ ಆಯುಕ್ತರೊಂದಿಗೆ ಬುಧವಾರ ಸಭೆ ಕರೆಯಲಾಗಿದೆ. ಸರ್ವೆ ವರದಿಗೂ, ಮಾಲೀಕರು ಘೋಷಣೆ ಮಾಡಿರುವ ಅಳತೆಗೂ ತಾಳೆ ಆಗುತ್ತದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ವ್ಯತ್ಯಾಸ ಕಂಡುಬಂದರೆ ಅಂತಹ ಮಾಲೀಕರಿಗೆ ದಂಡ ಹಾಗೂ ತೆರಿಗೆ ವಿಧಿಸುತ್ತೇವೆ. ಆದಾಯ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ’ ಎಂದರು.