ದೇಶದ 170 ರೈತ ಸಂಘಟನೆಗಳನ್ನು ಸೇರಿಸಿ ಮಹಾಸಂಘ ರಚಿಸಲಾಗಿದೆ. ಇದರ ಮೂಲಕ ‘ಕಿಸಾನ್ ಸಂಕಷ್ಟ ಮುಕ್ತಿ ಯಾತ್ರೆ’ ಆಯೋಜಿಸಲಾಗಿದೆ. ದಕ್ಷಿಣ ಭಾರತದಲ್ಲಿ ಸುಮಾರು 25 ಸಾವಿರ ಕಿ.ಮೀ ಸಂಚರಿಸಿದ್ದು, ಈಗ ಮೈಸೂರು ತಲುಪಿದೆ. ಸೆ. 23ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಸಮಾಪನ ಸಮಾರಂಭ ನಡೆಯಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.