ಇಳಕಲ್: ‘ರಂಗಭೂಮಿ ಜನ ಸಾಮಾನ್ಯರಿಗೆ ಮನರಂಜನೆ ಜೊತೆಗೆ ಮೌಲ್ಯಗಳನ್ನು ತಲುಪಿಸುವ ಮಾಧ್ಯಮವಾಗಿದೆ. ಈಚೆಗೆ ಸಿನೆಮಾ, ಟಿವಿ ಹಾವಳಿಯಿಂದಾಗಿ ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕಲಾವಿದರನ್ನು ಉತ್ತೇಜಿಸಲು ಪ್ರೇಕ್ಷಕರು ನಾಟಕ ನೋಡಬೇಕು’ ಎಂದು ನಗರಸಭೆ ಸದಸ್ಯ ದೇವಾನಂದ ಕಾಶಪ್ಪನವರ ಹೇಳಿದರು.
ಏಣಗಿ ಬಾಳಪ್ಪ ಸ್ಮರಣಾರ್ಥ ನಗರದ ವಿಜಯ ಮಹಾಂತೇಶ ಅನುಭವ ಮಂಟಪದ ಆವರಣದಲ್ಲಿ ಸ್ನೇಹರಂಗ ಹಾಗೂ ನೀನಾಸಂ ತಿರುಗಾಟ ನಾಟಕಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.