ಔರಾದ್: ತಾಲ್ಲೂಕಿನ ಸಂತಪುರ ಹೋಬಳಿ ಕೇಂದ್ರದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಹಾಳಾಗಿ ಸಾರ್ವಜನಿಕರಿಗೆ ತೊಂದರೆ ಎದುರಿಸುವಂತಾಗಿದೆ. ಕಳೆದ ಐದಾರು ತಿಂಗಳ ಹಿಂದೆ ರಸ್ತೆ ವಿಸ್ತರಿಸುವ ನೆಪದಲ್ಲಿ ಅಂಗಡಿಗಳು ತೆರವು ಮಾಡಲಾಗಿದೆ. ಆದರೆ ಇಂದಿಗೂ ರಸ್ತೆ ಅಕ್ಕ ಪಕ್ಕ ಬಿದ್ದಿರುವ ಕಲ್ಲು ಮಣ್ಣು ತೆರವು ಮಾಡಿಲ್ಲ.