ಹೊಳಲ್ಕೆರೆ: ತಾಲ್ಲೂಕಿನ ಕುನುಗಲಿಯಲ್ಲಿ ಗಂಗಾ ಕಾವೇರಿ ಬೀಜ ಕಂಪೆನಿಯಿಂದ ಮಂಗಳವಾರ ಮೆಕ್ಕೆಜೋಳ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಯಿತು. ಉತ್ತಮ ಇಳುವರಿ ಪಡೆದ ಗ್ರಾಮದ ರೈತ ಜಿ.ಸೋಮಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು.
‘ಈ ವರ್ಷ ಉತ್ತಮ ಮಳೆ ಬಂದಿದ್ದರಿಂದ ಇಳುವರಿ ಹೆಚ್ಚಾಗಿದೆ. ಉತ್ತಮ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡುವುದರಿಂದ ಅಧಿಕ ಇಳುವರಿ ಪಡೆಯಬಹುದು’ ಎಂದು ರೈತ ಸೋಮಶೇಖರಪ್ಪ ಹೇಳಿದರು.
ಸಂಸ್ಥೆಯ ದಾವಣಗೆರೆ ಜಿಲ್ಲೆ ಮಾರಾಟ ಅಧಿಕಾರಿ ಸೋಮಶೇಖರ್, ಚಿತ್ರದುರ್ಗ ಜಿಲ್ಲೆಯ ಮಾರಾಟ ಅಧಿಕಾರಿ ಸಿ.ರಮೇಶ್, ಶ್ರೀನಿವಾಸ್, ಮಂಜುನಾಥ, ತಿಪ್ಪೇಸ್ವಾಮಿ, ಯೋಜನಾಧಿಕಾರಿ ಎಂ.ಮಂಜುನಾಥ್, ಲೋಹಿತ್ ಕುಮಾರ್, ದಾನೇಶ್ ಇದ್ದರು.