ತೆಂಗಿನ ಗರಿ, ಬಾಳೆ, ಹೂವುಗಳಿಂದ ಸಿಂಗರಿಸಿದ್ದ ವಾಹನದಲ್ಲಿ ಭಾವಚಿತ್ರದ ಮೆರವಣಿಗೆಯಲ್ಲಿ ಹಾಲುಮತ ಸಮಾಜದ ಯುವ ಸಮೂಹ ಸಂಭ್ರಮಕ್ಕೆ ಮೆರುಗು ತುಂಬಿತು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಸುರೇಶ ಪೂಜೇರಿ, ಮಲ್ಲಪ್ಪ ಅಜ್ಜೋಡಿ, ರಂಗಪ್ಪ ಹಳಕಟ್ಟಿ, ಪ್ರಮುಖರಾದ ಮಹ್ಮದ್ ರಫೀಕ ಪೀರಖಾನ್, ಸೈದುಸಾಬ್ ಚೌಧರಿ, ವೆಂಕಪ್ಪ ಹಳಕಟ್ಟಿ, ಹನಮಂತ ಕಟಗಿ, ಈಶ್ವರಪ್ಪ ಹಾಗೂ ಯಲ್ಲಪ್ಪ ಹಳಕಟ್ಟಿ, ಪರಶುರಾಮ ಲಖಮಾಪೂರ, ಹನಮಂತ ಅಜ್ಜೋಡಿ, ಪಟ್ಟಣದ ಹಾಲುಮತ ಸಮಾಜದ ಹಿರಿಯರು, ಕನಕದಾಸ ಕುರುಬರ ಕ್ಷೇಮಾಭಿವೃದ್ಧಿ ಸಂಘ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘಗಳ ಸದಸ್ಯರು ಪಾಲ್ಗೊಂಡಿದ್ದರು.