ಇದಕ್ಕೆ ಸಮಾಧಾನಗೊಳ್ಳದ ಪ್ರಕಾಶ್ಮೂರ್ತಿ, ‘ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಇಲ್ಲದಿದ್ದರೂ ದೇಶ ಮುನ್ನಡೆಯುತ್ತದೆ. ಆದರೆ, ಪೊಲೀಸರು ಅರ್ಧ ಗಂಟೆ ಇಲ್ಲವೆಂದರೂ ಏನೆಲ್ಲಾ ಘಟನೆಗಳು ಆಗುತ್ತದೆ ಎಂಬ ಪರಿಜ್ಞಾನ ನನಗಿದೆ. ಪ್ರತಿಯೊಬ್ಬರಿಗೂ ಪೊಲೀಸರ ನೆರವು ಅಗತ್ಯ. ಆದರೆ, ಇಲ್ಲಿಯವರೆಗೂ ಯಾವುದೇ ತೊಂದರೆ ಆಗದಂತೆ ನಡೆಸಿಕೊಂಡು ಬರಲಾಗಿರುವ ಕೆಡಿಪಿ ಸಭೆಗೆ ಪೊಲೀಸರ ಅವಶ್ಯಕತೆ ಇದೆಯೇ’ ಮರು ಪ್ರಶ್ನಿಸಿದರು.