ಬೆಂಗಳೂರು: ಹೋಟೆಲ್ ಮಾಲೀಕ ರಾಜುಶೆಟ್ಟಿ ಮೇಲೆ ಎಸಿಪಿ ಮಂಜುನಾಥ್ ಬಾಬು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಉತ್ತರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ಅವರು ರಾಜುಶೆಟ್ಟಿ ಹಾಗೂ ಹೋಟೆಲ್ ನೌಕರರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಸಿಪಿ, ‘ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳು ದಾಖಲಾಗಿರುವ ಡಿವಿಆರ್ ಪೆಟ್ಟಿಗೆಯನ್ನು ವಶಕ್ಕೆ ಪಡೆದಿದ್ದೇನೆ. ಹೋಟೆಲ್ ನೌಕರರನ್ನು ವಿಚಾರಣೆ ನಡೆಸಿ ಆ ದಿನ ಹೋಟೆಲ್ನಲ್ಲಿ ನಡೆದದ್ದೇನು ಎಂಬ ಬಗ್ಗೆ ಮಾಹಿತಿ ಪಡೆದಿದ್ದೇನೆ’ ಎಂದು ಹೇಳಿದರು.
‘ಎಸಿಪಿ ಹಾಗೂ ಅವರ ಜತೆಗಿದ್ದ ಕಾನ್ಸ್ಟೆಬಲ್ ಅವರನ್ನು ಶನಿವಾರ ವಿಚಾರಣೆ ನಡೆಸುತ್ತೇನೆ. ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಸೋಮವಾರ ಅದನ್ನು ಕಮಿಷನರ್ಗೆ ಸಲ್ಲಿಸು ತ್ತೇನೆ’ ಎಂದರು.