‘ಮಧ್ಯಸ್ಥಿಕೆ ವಹಿಸಲು ಶ್ರೀ ಶ್ರೀ ರವಿಶಂಕರ್ ಯಾರು? ವಿದೇಶಿ ದೇಣಿಗೆ ಪಡೆದುಕೊಂಡು ಸ್ವಯಂಸೇವಾ ಸಂಸ್ಥೆ ನಡೆಸುವುದನ್ನು ಅವರು ಮುಂದುವರಿಸಲಿ. ಅವರು ಭಾರಿ ಸಂಪತ್ತು ಗಳಿಸಿಕೊಂಡಿದ್ದಾರೆ ಎಂಬುದು ನನ್ನ ಅನಿಸಿಕೆ. ತನಿಖೆಯಿಂದ ತಪ್ಪಿಸಿಕೊಳ್ಳುವುದುಕ್ಕಾಗಿ ರಾಮ ಮಂದಿರ ವಿಷಯದಲ್ಲಿ ಮೂಗುತೂರಿಸುತ್ತಿದ್ದಾರೆ’ ಎಂದು ವೇದಾಂತಿ ಹೇಳಿದ್ದನ್ನು ಎಎನ್ಐ ವರದಿ ಮಾಡಿದೆ. ರಾಮ ಮಂದಿರ ಚಳವಳಿಯಲ್ಲಿ ಒಬ್ಬರಾಗಿರುವ ವೇದಾಂತಿ ಅವರು ಶ್ರೀ ಶ್ರೀ ರವಿಶಂಕರ್ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.