ಮಳೆ ಕೊರತೆಯಿಂದ ಈ ಬಾರಿ ವಾಣಿಜ್ಯ ಬೆಳೆಗಳಿಲ್ಲದೇ ರೈತರು ಸಂಕಷ್ಟ ಎದುರಿಸಿದ್ದಾರೆ. ಹಿಂಗಾರು ಮಳೆಯಿಂದ ಅಲ್ಪ ಚೇತರಿಕೆ ಕಂಡಿದ್ದ ರೈತರು ಈ ಭಾಗದಲ್ಲಿ ಕಡಲೆ, ಜೋಳ, ಕುಸಬಿ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಆದರೆ, ಈಗ ಕಡಲೆ ಬೆಳೆಗೆ ಕೀಡಿಗಳ ಕಾಟ ಕಂಡುಬಂದಿದ್ದು, ಅವುಗಳ ನಿಯಂತ್ರಣಕ್ಕೆ ಕ್ರಿಮಿನಾಶಕ ಸಿಂಪರಿಸಿದರೂ ಏನೂ ಪ್ರಯೋಜನವಾಗುತ್ತಿಲ್ಲ.