‘ಸಮಾಜದಲ್ಲಿದ್ದ ಅಸಮಾನತೆ, ಮೇಲು–ಕೀಳು, ಶೋಷಣೆ ಧಿಕ್ಕರಿಸಿ ಹುಟ್ಟಿದ್ದೇ ಶಿವಶರಣರ ಸಾಹಿತ್ಯ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರಂತಹ ಶಿವಶರಣರು ವಚನ ಸಾಹಿತ್ಯದ ಮೂಲಕ ಕ್ರಾಂತಿಯನ್ನೇ ಮಾಡಿದರು. ಇವರಿಂದ ಪ್ರಭಾವಿತರಾದ ಪಾಲ್ಕುರಿಕೆ ಸೋಮನಾಥ, ಮಲ್ಲಿಕಾರ್ಜುನ ಪಂಡಿತ ಅವರು ತೆಲುಗು ನೆಲದಲ್ಲಿ ಶೈವ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದರು. ಬಸವಣ್ಣನ ಕುರಿತು 12ನೇ ಶತಮಾನದಿಂದ 19ನೇ ಶತಮಾನದವರೆಗೆ ತೆಲುಗು ನಾಡಿನಲ್ಲಿ 355 ಕೃತಿಗಳು ರಚನೆಯಾಗಿವೆ. ಕನ್ನಡ ಮತ್ತು ತೆಲುಗು ನಡುವೆ ಶೈವ ಸಾಹಿತ್ಯ ಗಾಢ ಸಂಬಂಧ ಬೆಸೆದಿದೆ’ ಎಂದರು.