ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಸಿದ್ಧಾರ್ಥ ವಿರುದ್ಧ ದಾಖಲಿಸಿರುವ ಆರೋಪ ಸಾಬೀತಪಡಿಸುವಲ್ಲಿ ವಿಧಾನಸೌಧ ಠಾಣಾ ಪೊಲೀಸರು ಸಫಲವಾದರೆ, ಐ.ಟಿ ಇಲಾಖೆಯು ಬಡ್ಡಿ ಸಮೇತ ₹ 1.97 ಕೋಟಿಯನ್ನು ಹಿಂದಿರುಗಿಸಬೇಕು. ಈ ಕುರಿತಂತೆ ಪೊಲೀಸರು ಹಾಗೂ ಐ.ಟಿ ಇಲಾಖೆ ಒಪ್ಪಂದ (ಇಂಡೆಮ್ನಿಟಿ ಬಾಂಡ್) ಮಾಡಿಕೊಳ್ಳಬೇಕು’ ಎಂದು ಸೂಚಿಸಿದೆ.
‘ವಕೀಲ ಸಿದ್ಧಾರ್ಥ ಅವರ ಕಾರಿನಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿದೆ. ಅದಕ್ಕೆ ಸೂಕ್ತ ದಾಖಲೆಗಳಿಲ್ಲ. ಆದ್ದರಿಂದ ಈ ಹಣ ಯಾರಿಗೆ ಸೇರಿದೆ ಮತ್ತು ಅವರು ಆದಾಯ ತೆರಿಗೆ ಪಾವತಿ ಮಾಡಿದ್ದಾರೆಯೇ ಇಲ್ಲವೇ ಅಥವಾ ಇದು ತೆರಿಗೆಯನ್ನು ವಂಚಿಸಿದ ಹಣವೇ’ ಎಂಬುದರ ಬಗ್ಗೆ ವಿವರವಾದ ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ ಈ ಹಣವನ್ನು ನಮ್ಮ ವಶಕ್ಕೆ ಒಪ್ಪಿಸಿ’ ಎಂಬುದು ಐ.ಟಿ.ಕೋರಿಕೆ.