ಪಟ್ಟಣದಲ್ಲಿ ಸಾರ್ವಜನಿಕ ಸಮಾರಂಭ ನಡೆಸಲು ಒಂದು ಸುಸಜ್ಜಿತ ರಂಗಮಂದಿರ ಇಲ್ಲ. ಶಿಕ್ಷಣ ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಈ ಶಾಲಾ ಆವರಣದಲ್ಲಿ ಒಂದು ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ 2000ನೇ ಸಾಲಿನಲ್ಲಿ ಶಾಸಕರಾಗಿ ಮಿನಿ ರಂಗಮಂದಿರ ನಿರ್ಮಿಸಿದ ವಡ್ನಾಳ್ ರಾಜಣ್ಣ ಅವರೇ ಹಾಲಿ ಶಾಸಕರಾಗಿದ್ದು, ನೂತನ ರಂಗಮಂದಿರ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬಿಡುಗಡೆಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಪಟ್ಟಣದ ಅಣ್ಣಪ್ಪ, ಭರತ್ಕುಮಾರ್ ಒತ್ತಾಯಿಸಿದ್ದಾರೆ.