ಗೋರಖಪುರ್: 2014 ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಚಾಯ್ ಪೇ ಚರ್ಚಾ ಕಾರ್ಯಕ್ರಮದ ಮೂಲಕ ಚುನಾವಣಾ ಪ್ರಚಾರ ಮಾಡಿದ್ದರು. ಇದೀಗ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಖುಷಿಯಲ್ಲಿ ಗೋರಖ್ಪುರ್ದ ಅನ್ವರ್ ಹುಸೇನ್ ಎಂಬ ಕಾಂಗ್ರೆಸ್ ಯುವ ನಾಯಕರೊಬ್ಬರು ಜನರಿಗೆ 'ರಾಹುಲ್ ಹಾಲು' ವಿತರಿಸಿ ಸಂಭ್ರಮಿಸಿದ್ದಾರೆ.
ಇಷ್ಟು ವರುಷ ರಾಹುಲ್ ಅವರನ್ನು ಬ್ರಾಂಡ್ ಎಂದು ಗುರುತಿಸಲ್ಪಡಲು ನಾವು ಕೆಲಸ ಮಾಡಿದ್ದೆವು. ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ. ನಿಮ್ಮಂತ ಯುವ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಬೇಕು ಎಂದು ರಾಹುಲ್ ನನ್ನಲ್ಲಿ ಹೇಳಿದ್ದರು.