ದೇಶದ ರಕ್ಷಣೆಯೇ ನಮ್ಮ ಆದ್ಯತೆ ಎಂಬ ವಿಷಯದ ಬಗ್ಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಜ್ಯಪಾಲರು, ಮುಗ್ದ ಜನರ ಹತ್ಯೆಗೈದ ಕಸಬ್ನ್ನು ಗಲ್ಲಿಗೇರಿಸಲು ಹಲವಾರು ವರ್ಷಗಳೇ ಬೇಕಾಯಿತು. ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿರುವವನ್ನು ತಕ್ಷಣವೇ ಶಿಕ್ಷಿಸಬೇಕು. ಇಂಥಾ ವಿಶ್ವಾಸಘಾತುಕರನ್ನು ಗಲ್ಲಿಗೇರಿಸಿದ ಸುದ್ದಿಯನ್ನು ಯಾವುದೇ ಮಾಧ್ಯಮಗಳು ಪ್ರಕಟಿಸಬಾರದು.ಉಗ್ರರ ಬಗ್ಗೆ ನಾವೆಂದೂ ಅನುಕಂಪ ಇಟ್ಟುಕೊಳ್ಳಬಾರದು ಎಂದಿದ್ದಾರೆ.