ತಮ್ಮ ಕುರಿತು ಸದಾನಂದಗೌಡ ನೀಡಿದ ಹೇಳಿಕೆ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ನನ್ನ ಬಳಿ ಬಂದವರು ಈಗ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಮಂತ್ರಿ ಮಾಡಿ ಎಂದು ಬಿ.ಎಸ್.ಯಡಿಯೂರಪ್ಪ ಅರ್ಜಿ ಹಿಡಿದುಕೊಂಡು ಬಂದಿದ್ದರು. ಪಕ್ಷ ಒಡೆಯಲು ಸಿದ್ಧರಿದ್ದರು. ಆದರೆ, ನಾವು ಅವರ ಪಕ್ಷ ಒಡೆಯಲು ಹೋಗಲಿಲ್ಲ. ಅಧಿಕಾರಕ್ಕಾಗಿ ಬಿಜೆಪಿಯವರೇ ನನ್ನ ಮನೆಯ ಬಳಿಗೆ ಬಂದರೇ ಹೊರತು, ನಾನು ಅವರ ಮನೆಗೆ ಹೋಗಲಿಲ್ಲ’ ಎಂದು ತಿಳಿಸಿದರು.