`ನಾನು ಎಷ್ಟೇ ಸಮಾಧಾನ ಹೇಳಿದರೂ ಕಳೆದುಹೋದ ನಿಮ್ಮ ಮಗನನ್ನು ವಾಪಸ್ ತರಲು ಸಾಧ್ಯವಿಲ್ಲ. ಆದರೂ ಸಮಾಧಾನ ತಂದುಕೊಳ್ಳಿ' ಎಂದು ದೇವೇಗೌಡ ಅವರು ದೀಪಕ್ ತಾಯಿ ಪ್ರೇಮಾ ಅವರಿಗೆ ಹೇಳಿದಾಗ, ಪ್ರೇಮಾ ಅವರು ಕಣ್ಣೀರಿಟ್ಟರು. `ಮನೆಗೆ ಆಧಾರವಾಗಿದ್ದ ಮಗ ತೀರಿಕೊಂಡ. ಇರುವ ಇನ್ನೊಬ್ಬ ಒಬ್ಬ ಮಗನಿಗೆ ಮಾತು ಬಾರದು. ಇವನನ್ನು ಕಟ್ಟಿಕೊಂಡು ಏನು ಮಾಡಲಿ' ಎಂದು ದುಃಖಿಸಿದರು.