ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳೂ ಭರಾಟೆಯ ಪ್ರಚಾರ ನಡೆಸಿದರು. ‘ಚುನಾವಣೆ ಇದೆ ಎನ್ನುವುದಕ್ಕೂ ಹತ್ತು ದಿನಗಳ ಮುಂಚೆಯೇ ಹಣದ ಆಮಿಷವೂ ಸೇರಿದಂತೆ ಭರಪೂರ ಬಾಡೂಟ, ಅರಮನೆ ಮೈದಾನದ ಆವರಣದಲ್ಲಿ ಗುಂಡು–ತುಂಡಿನ ಪಾರ್ಟಿಗಳು, ಆಯ್ದ ವ್ಯಕ್ತಿಗಳಿಗೆ ಪ್ರವಾಸ, ಪುರುಷರಿಗೆ ಬೆಳ್ಳಿ ನಾಣ್ಯ ಹಾಗೂ ಮಹಿಳಾ ವಕೀಲರಿಗೆ ಬೆಳ್ಳಿ ಕುಂಕುಮದ ಬಟ್ಟಲು ಹಾಗೂ ವಾಚ್ಗಳನ್ನೂ ನೀಡಲಾಗಿದೆ. ಮತ್ತೂ ಕೆಲವು ಮಹಿಳಾ ವಕೀಲರಿಗೆ ಒಂದು– ಒಂದೂವರೆ ಸಾವಿರ ರೂಪಾಯಿ ಮೌಲ್ಯದ ಸೀರೆಗಳನ್ನು ಗಿಫ್ಟ್ ಪ್ಯಾಕ್ಗಳಲ್ಲಿ ಕೊಡಲಾಗಿದೆ’ ಎಂಬ ಆರೋಪ ಕೇಳಿಬಂದಿತ್ತು.