ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಫೆ.27ರಂದು ನಡೆಯಲಿರುವ ‘ರೈತಬಂಧು ಯಡಿಯೂರಪ್ಪ ಸಮಾವೇಶ’ದಲ್ಲಿ ‘ಮುಷ್ಟಿ ಅಕ್ಕಿ ಅಭಿಯಾನಕ್ಕೆ’ ಚಾಲನೆ ನೀಡಲಾಗುವುದು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
‘ಅಂದಿನ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಅವರ ಸಮ್ಮುಖದಲ್ಲಿಯೇ ಅಭಿಯಾನ ಆರಂಭಿಸಲಾಗುವುದು. ರಾಜ್ಯದಾದ್ಯಂತ 15 ದಿನಗಳ ಕಾಲ ಅಭಿಯಾನ ನಡೆಯಲಿದೆ’ ಎಂದರು.