ಪಟ್ಟಣದ ಸಮೀಪದ ಭಸ್ಮಡ್ಕ ಪಯ ಸ್ವಿನಿ ಹೊಳೆಬದಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡನ್ನು ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆಯೊಂದಿಗೆ ಊರವರು ಹರಸಾಹಸ ಪಟ್ಟರು. ಈ ಸಂದರ್ಭ ಒಂದು ಮರಿ ಆನೆಗೆ ಅನಾರೋಗ್ಯ ಬಾಧಿಸಿರುವುದನ್ನು ಅರಣ್ಯ ಅಧಿಕಾ ರಿಗಳು ಪತ್ತೆ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಕಾಡಾನೆಗಳು ಭಸ್ಮಡ್ಕ ಪ್ರದೇಶದಲ್ಲೇ ಇದ್ದವು. ಸುಳ್ಯ, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ಅರಣ್ಯ ಸಿಬ್ಬಂದಿ ಪ್ರಯುತ್ನದ ಫಲ ಶನಿವಾರ ರಾತ್ರಿ ಕಾಡಾನೆಗಳು ಅಸ್ವಸ್ಥ ಆನೆ ಮರಿಯನ್ನು ಅಲ್ಲೇ ಬಿಟ್ಟು ಮಂಡೆ ಕೋಲು ಕಾಡಿನ ಕಡೆಗೆ ತೆರಳಿವೆ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದರು.