ಸಮಾಜವು ಒಂದೊಂದು ಕಾಲಘಟ್ಟದಲ್ಲಿ ಬದಲಾಗುತ್ತಾ ಬಂದಿದೆ. ಒಂದೊಂದು ದೇಶದಲ್ಲೂ ಸಮಾಜ ಸುಧಾರಕರು ಇದ್ದಾರೆ. ಅದೇ ರೀತಿ ನಮ್ಮ ನಾಡಿನಲ್ಲೂ ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್ ಅವರು ಹುಟ್ಟಿದ್ದೇ ಸಮಾಜದ ಸುಧಾರಣೆಗಾಗಿ. ಇಂತಹ ಮಹಾತ್ಮರ ಜಯಂತಿಯನ್ನು ನಾವು ಆಚರಣೆ ಮಾಡಿದರೆ ಸಾಲದು. ಅವರು ಕೊಟ್ಟಿರುವ ಸಂದೇಶವನ್ನು ಸತ್ಯಮಾರ್ಗದಲ್ಲಿ ನಡೆದು ತೋರಿಸಬೇಕು ಎಂದರು.