ಕೋಲ್ಕತ್ತ: ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಮಕ್ರಾಂಪುರ್ನತೃಣಮೂಲ ಕಾಂಗ್ರೆಸ್(ಟಿಎಂಸಿ) ಕಚೇರಿಯಲ್ಲಿ ಗುರುವಾರ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಮೃತ ವ್ಯಕ್ತಿಯನ್ನು 40 ವರ್ಷದ ‘ಸುದೀಪ್ಟೋ ಘೋಷ್’ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಮಿಡ್ನಾಪುರದ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
West Bengal: A blast has occurred at TMC party office in Makarampur of West Midnapore district. One party worker dead, 5 injured. A police team is present at the spot. Investigation is underway. pic.twitter.com/Agg3HC3o5h
ಸ್ಫೋಟದ ಪರಿಣಾಮ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಶಬ್ಧ ಕೇಳಿ ಬಂದಿತ್ತು. ಪಕ್ಷದ ಕಚೇರಿಯ ಒಂದು ಭಾಗ ಸಂಪೂರ್ಣವಾಗಿ ನಾಶವಾಗಿದೆ.
ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ತೃಣಮೂಲ ಕಾಂಗ್ರೆಸ್ ತಿಳಿಸಿದೆ. ಆದರೆ ಕಚೇರಿಯಲ್ಲಿ ಕಚ್ಚಾ ಬಾಂಬ್ಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಬಿಜೆಪಿ ನಾಯಕರು ದೂರಿದ್ದಾರೆ.
‘ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಚೇರಿಯಲ್ಲಿ ಬಾಂಬ್ಗಳನ್ನು ಸಂಗ್ರಹಿಸಿದ್ದರು’ ಎಂದುಮಿಡ್ನಾಪುರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಮಿತ್ ಡ್ಯಾಶ್ ಆರೋಪಿಸಿದ್ದಾರೆ.
‘ಇಂದು ಪಕ್ಷದ ಸಭೆಗಾಗಿ ಕಾರ್ಯಕರ್ತರೆಲ್ಲ ಕಚೇರಿಗೆ ಆಗಮಿಸಿದ್ದರು. ಇದೇ ವೇಳೆಸ್ಫೋಟ ಸಂಭವಿಸಿದೆ. ಆದರೆ ವಿರೋಧ ಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಮಿಡ್ನಾಪುರ ಟಿಎಂಸಿ ಅಧ್ಯಕ್ಷ ಅಜಿತ್ ಮೈತಿ ಸ್ಪಷ್ಟಪಡಿಸಿದ್ದಾರೆ.