ದೇಶದ ಎಲ್ಲೆಡೆ ಅತ್ಯಾಚಾರ, ಮಾನಭಂಗ, ಮರ್ಯಾದೆಗೇಡು ಹತ್ಯೆ, ಬಲಾತ್ಕಾರದಂಥ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಪ್ರಾಗೈತಿಹಾಸ ಪುರಾಣ ಕಾಲದಿಂದಲೂ ಮಾನವನ ಕೌಮಾರ್ಯದಿಂದ ವಿವಾಹ ಹಂತದ ತನಕವೂ ಅಗಲಿಕೆ, ವಿರಹ, ಅವಿವಾಹಿತ, ವೈಧವ್ಯ, ಸೈನಿಕಸೇವೆ ಮುಂತಾದ ಸಂದರ್ಭ ಪರಿಸ್ಥಿತಿಗಳಲ್ಲಿ ಜೈವಿಕ ಅಗತ್ಯದ ಸಮತೋಲನಕ್ಕೆ ಲೈಂಗಿಕ ಮುಕ್ತತೆ ಅತ್ಯವಶ್ಯಕ ಎನ್ನುವುದು ಅಡಿಗಡಿಗೆ ಪ್ರತಿಪಾದಿತವಾಗಿದೆ. ನಿದ್ರೆ, ಆಹಾರ, ಬಾಯಾರಿಕೆಯಂತೆ ಮೈಥುನಕ್ಕೂ ಭಾರತೀಯ ಸಂಸ್ಕೃತಿಯಲ್ಲಿ ಪ್ರಾಮುಖ್ಯ ನೀಡಲಾಗಿದೆ. ಜಗತ್ತಿಗೆ