35 ವರ್ಷಗಳ ಹಿಂದೆ, ಶ್ರೀಗಳು ಮೌನಾನುಷ್ಠಾನ ಮಾಡಿದ ಸ್ಥಳದಲ್ಲಿಯೇ ಸಿದ್ಧಗೊಳಿಸಿದ್ದ ಸಮಾಧಿಯಲ್ಲಿ ಬಸವತತ್ವದಂತೆ ಇಷ್ಟಲಿಂಗ, ರುದ್ರಾಕ್ಷಿ, ವಿಭೂತಿ
ಗಳನ್ನು ಬಳಸಿ, ವಚನ ಪಠಣ, ಅಭಿಷೇಕ ಮಾಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗದುಗಿನ ತೋಂಟದಾರ್ಯ ಶ್ರೀಗಳು ಹಾಗೂ ಚಿತ್ರದುರ್ಗದ ಮುರುಘಾಶರಣರ ನೇತೃತ್ವದಲ್ಲಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಮುದಗಲ್ ಮಹಾಂತ ಸ್ವಾಮೀಜಿ ಅಂತಿಮ ಸಂಸ್ಕಾರದ ವಿಧಿವಿಧಾನ ನೆರವೇರಿಸಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಇದ್ದರು.