ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇಗುಲಕ್ಕೆ ರೋಹಿಣಿ: ಬಸಪ್ಪನಿಂದ ಆಶೀರ್ವಾದ

Last Updated 10 ಏಪ್ರಿಲ್ 2023, 10:24 IST
ಅಕ್ಷರ ಗಾತ್ರ

ಭಾರತೀನಗರ (ಮಂಡ್ಯ): ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ದೇವರ ದರ್ಶನ ಪಡೆದರು.

ಮನೆ ದೇವರಾದ ಕಾಲಭೈರವೇಶ್ವರಸ್ವಾಮಿಯ ದರ್ಶನ ಪಡೆದು, ಮಂಗಳಾರತಿ ಸ್ವೀಕರಿಸಿದರು. ನಂತರ ಗೌಪ್ಯ ಹರಕೆ ಹೊತ್ತು ಕಾಲಭೈರವೇಶ್ವರಸ್ವಾಮಿ ದೇವರ ಬಸಪ್ಪನ ಪಾದ ಪಡೆಯಲು ಮುಂದಾದರು.

ದೇವರ ಬಸಪ್ಪನ ಬಳಿ ಹರಕೆ ಕಟ್ಟಿಕೊಂಡು ರೋಹಿಣಿ ಸಿಂಧೂರಿ ಕೈಯನ್ನು ಬಸಪ್ಪನ ಪಾದದ ಮುಂದೆ ಇರಿಸಿ ದೇವರನ್ನು ಧ್ಯಾನಿಸಿದರು.

ಬಸಪ್ಪ ಕೆಲ ಸಮಯದ ಬಳಿಕ ರೋಹಿಣಿ ಸಿಂಧೂರಿಗೆ ಬಲಭಾಗದ ಪಾದ ನೀಡಿದೆ. ಇದರಿಂದ ಸಂತಸ
ಗೊಂಡ ರೋಹಿಣಿ, ದೇವಾಲಯಕ್ಕೆ ಮತ್ತೆ ಬಂದು ಅಭಿವೃದ್ಧಿಗೆ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ದೇವಾಲಯದ ಅಧ್ಯಕ್ಷ ಶಿವಲಿಂಗೇಗೌಡ, ಆಡಳಿತ ಮಂಡಳಿ ಸದಸ್ಯರಾದ ಡಿ.ಎ.ಕೆರೆ ರಘು, ಯಜಮಾನ್‌ ಪುಟ್ಟ ರಾಜು, ಯಜಮಾನ್‌ ಪುಟ್ಟೇಗೌಡ, ಮುಖಂಡರಾದ ಸಿದ್ದಪ್ಪ ಇದ್ದರು.

ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಸಪ್ಪನ ಆಶೀರ್ವಾದ ಪಡೆದರು.
ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಬಸಪ್ಪನ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT