‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯಕೊಡಿಸಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ಪ್ರಚಾರ ಬೇಕಿದೆ. 2021ರಲ್ಲಿನ ಯಾವುದೋ ಒಬ ಹೆಣ್ಣು ಮಗಳ ಹೇಳಿಕೆಯನ್ನು ರಹಸ್ಯವಾಗಿ ನ್ಯಾಯಾಧೀಶರ ಮುಂದೆ ಕೊಡಿಸಿದ್ದಾರೆ. ಆದರೆ, ಗೃಹ ಸಚಿವರು ‘ನಮ್ಮ ಮೇಲೆ ಯಾವುದೇ ರೀತಿಯ ಅನುಮಾನ ಬರಬಾರದು’ ಎಂದಿದ್ದಾರೆ. ಹಾಗಿದ್ದರೆ, ನ್ಯಾಯಾಧೀಶರ ಮುಂದೆ ಮಹಿಳೆ ಹೇಳಿಕೆ ಕೊಟ್ಟಿದ್ದನ್ನು ಮಾಧ್ಯಮಗಳಿಗೆ ತಲುಪಿಸಿದವರು ಯಾರು’ ಎಂದು ಪ್ರಶ್ನಿಸಿದರು.