<p><strong>ನವದೆಹಲಿ: </strong>ನೋಟು ರದ್ದು ಮಾಡುವ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಂಬಿಕಸ್ಥ ಅಧಿಕಾರಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಅಧಿಕಾರಿ ಬಗ್ಗೆ ಆರ್ಥಿಕ ವಲಯದವರನ್ನು ಹೊರತುಪಡಿಸಿದರೆ, ಇತರರಿಗೆ ಹೆಚ್ಚಾಗಿ ತಿಳಿದಿಲ್ಲ.<br /> <br /> ಈ ಅಧಿಕಾರಿಯ ಹೆಸರು ಹಸ್ಮುಖ್ ಅಧಿಯಾ. ಅಧಿಯಾ ಹಾಗೂ ಇತರ ಐದು ಜನರಿಗೆ ನೋಟು ರದ್ದತಿ ಬಗ್ಗೆ ಮಾಹಿತಿ ಇತ್ತು. ಆದರೆ, ಅವರು ಈ ಗುಟ್ಟು ಬಿಟ್ಟುಕೊಡದಿರುವ ಶಪಥ ಮಾಡಿದ್ದರು ಎನ್ನುತ್ತವೆ ಮೂಲಗಳು.<br /> <br /> ಈ ಆರು ಜನರಿಗೆ ಯುವಕರ ಇನ್ನೊಂದು ತಂಡ ಸಹಾಯ ಮಾಡುತ್ತಿತ್ತು. ಯುವ ತಂಡವು ಪ್ರಧಾನಿಯವರ ನವದೆಹಲಿ ನಿವಾಸದ ಎರಡು ಕೊಠಡಿಗಳಲ್ಲಿ ಕೆಲಸ ಮಾಡುತ್ತಿತ್ತು.<br /> <br /> ನೋಟು ರದ್ದತಿ ವಿಚಾರದಲ್ಲಿ ಈಗ ಗೊತ್ತಾಗಿರುವ ಸಂಗತಿಗಳು, ಮೋದಿ ಅವರು ಎಲ್ಲದರ ಮೇಲ್ವಿಚಾರಣೆಯನ್ನು ತಾವೇ ನಡೆಸುತ್ತಿದ್ದರು ಎಂದು ಹೇಳುತ್ತವೆ. ಅಲ್ಲದೆ, ಕ್ಲಿಷ್ಟಕರ ನಿರ್ಧಾರಗಳನ್ನೂ ಅವರು ತ್ವರಿತವಾಗಿ ಕೈಗೊಳ್ಳುತ್ತಿದ್ದರು ಎಂಬದು ಗೊತ್ತಾಗುತ್ತದೆ.<br /> <br /> ಈ ನಿರ್ಧಾರ ಕೈಗೊಳ್ಳುವಾಗ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆ ಹಾಗೂ ಜನಪ್ರಿಯತೆಯನ್ನು ಪಣಕ್ಕಿಟ್ಟಿದ್ದರು ಎಂದು ಮೂಲಗಳು ಹೇಳಿವೆ.<br /> <br /> ‘ನಾನು ಎಲ್ಲ ರೀತಿಯಿಂದ ಪರಿಶೀಲನೆ ನಡೆಸಿದ್ದೇನೆ. ಈ ಕೆಲಸದಲ್ಲಿ ಸೋಲು ಎದುರಾದರೆ, ದೂಷಣೆಯನ್ನು ನಾನೇ ಎದುರಿಸುವೆ’ ಎಂದು ಮೋದಿ ಅವರು ನೋಟು ರದ್ದತಿಗೆ ಕೆಲವೇ ಗಂಟೆಗಳ ಮೊದಲು ನಡೆದ ಸಂಪುಟ ಸಭೆಯಲ್ಲಿ ಹೇಳಿದ್ದರು ಎಂಬುದನ್ನು ಮೂರು ಜನ ಕೇಂದ್ರ ಸಚಿವರು ತಿಳಿಸಿದ್ದಾರೆ.<br /> <br /> ನೋಟು ರದ್ದತಿ ಕಾರ್ಯಕ್ರಮದ ಉಸ್ತುವಾರಿಯನ್ನು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಅಧಿಯಾ ನೋಡಿಕೊಳ್ಳುತ್ತಿದ್ದರು.<br /> ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಧಿಯಾ ಅವರು 2003ರಿಂದ 2006ರವರೆಗೆ ಅಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆ ಅವಧಿಯಲ್ಲಿ ಅಧಿಯಾ, ಮೋದಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು.<br /> <br /> ಅಧಿಯಾ ಅವರನ್ನು 2015ರಲ್ಲಿ ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧೀನದಲ್ಲಿದ್ದರು. ಆದರೆ ಆಗಲೂ ಅಧಿಯಾ ಅವರು ಪ್ರಧಾನಿ ಮೋದಿ ಜೊತೆ ನೇರ ಸಂಪರ್ಕ ಹೊಂದಿದ್ದರು. ಇವರಿಬ್ಬರು ಭೇಟಿಯಾದಾಗ, ಗುಜರಾತಿ ಭಾಷೆಯಲ್ಲಿ ಚರ್ಚಿಸುತ್ತಿದ್ದರು.<br /> <br /> ಕಪ್ಪುಹಣದ ತಡೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮೋದಿ ಅವರು ಹಣಕಾಸು ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಧಿಕಾರಿಗಳು ಹಾಗೂ ಆರ್ಥಿಕ ತಜ್ಞರ ಮೂಲಕ ಅಧ್ಯಯನ ನಡೆಸಿದ್ದರು ಎಂದು ಮೂಲಗಳು ವಿವರಿಸಿವೆ.<br /> <br /> ‘ಎಷ್ಟು ತ್ವರಿತವಾಗಿ ಹೊಸ ನೋಟುಗಳನ್ನು ಮುದ್ರಿಸುವ ಸಾಮರ್ಥ್ಯ ದೇಶಕ್ಕಿದೆ? ಹೊಸದಾಗಿ ಮುದ್ರಿಸುವ ನೋಟುಗಳನ್ನು ದೇಶದೆಲ್ಲೆಡೆ ತಲುಪಿಸುವುದು ಹೇಗೆ? ಠೇವಣಿ ಹರಿದುಬಂದರೆ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಒಳ್ಳೆಯದಾಗುತ್ತದೆಯೇ? ನೋಟು ರದ್ದತಿ ತೀರ್ಮಾನದಿಂದ ಲಾಭ ಆಗುವುದು ಯಾರಿಗೆ’ ಎಂಬ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ಬಯಸಿದ್ದರು.<br /> <br /> ಆದರೆ ಇಷ್ಟೂ ಪ್ರಶ್ನೆಗಳನ್ನು ಒಬ್ಬನೇ ವ್ಯಕ್ತಿಯ ಮುಂದೆ ಇಟ್ಟಿರಲಿಲ್ಲ. ಪ್ರಶ್ನೆಗಳನ್ನು ಗಮನಿಸಿ, ನೋಟು ರದ್ದತಿ ಆಲೋಚನೆ ಸರ್ಕಾರಕ್ಕೆ ಇದೆ ಎಂಬುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು.<br /> <br /> ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಗ್ಗೆ ಜನರಿಗೆ ತುಸು ಮಾಹಿತಿ ಸಿಕ್ಕಿದ್ದರೂ, ಇಡೀ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮದಂತೆ ಆಗುತ್ತಿತ್ತು ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.<br /> <br /> ಅಧಿಯಾ ಉಸ್ತುವಾರಿಯಲ್ಲಿ ಸಂಶೋಧಕರ ತಂಡ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳನ್ನು ಒಂದೆಡೆ ಕಲೆಹಾಕಿತು. ಇದು ಒಂದರ್ಥದಲ್ಲಿ ಪ್ರಾಯೋಗಿಕವಾಗಿತ್ತು.<br /> <br /> ಯುವ ಸಂಶೋಧಕರ ತಂಡದಲ್ಲಿ ದತ್ತಾಂಶ ಹಾಗೂ ಹಣಕಾಸು ವಿಶ್ಲೇಷಕರು ಇದ್ದರು. ಇವರಲ್ಲಿ ಕೆಲವರು ಮೋದಿ ಅವರ ಸಾಮಾಜಿಕ ಜಾಲತಾಣಗಳ ಖಾತೆ ಹಾಗೂ ಅವರ ಮೊಬೈಲ್ ಆ್ಯಪ್ ನಿರ್ವಹಿಸುವವರಾಗಿದ್ದರು.<br /> <br /> ಇಷ್ಟೆಲ್ಲ ಯೋಜನೆ ರೂಪಿಸಿದರೂ, ಎದುರಾಗುವ ಎಲ್ಲ ಪರಿಸ್ಥಿತಿಗಳನ್ನು ಊಹಿಸಲು ಆಗದು ಎಂಬುದು ಮೋದಿ ಮತ್ತು ಅಧಿಯಾ ಅವರಿಗೆ ಗೊತ್ತಿತ್ತು. ಆದರೂ ಅವರು ವೇಗವಾಗಿ ಹೆಜ್ಜೆ ಹಾಕಲು ಸಿದ್ಧವಾಗಿದ್ದರು.<br /> <br /> ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಸಾಧ್ಯ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶ್ಲೇಷಕರು ಏಪ್ರಿಲ್ ತಿಂಗಳಲ್ಲೇ ಹೇಳಿದ್ದರು.<br /> ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಿದ್ಧತೆ ನಡೆದಿದೆ ಎಂದು ಆರ್ಬಿಐ ಮೇ ತಿಂಗಳಲ್ಲಿ ಹೇಳಿತ್ತು. ₹ 2,000 ಮುಖಬೆಲೆಯ ನೋಟುಗಳ ವಿನ್ಯಾಸಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅದು ಆಗಸ್ಟ್ನಲ್ಲಿ ಹೇಳಿತು.<br /> <br /> ಈ ಕುರಿತು ಮಾಧ್ಯಮಗಳು ಅಕ್ಟೋಬರ್ನಲ್ಲಿ ವರದಿ ಪ್ರಕಟಿಸುವ ವೇಳೆಗೆ ನೋಟು ಮುದ್ರಣಾಲಯಗಳಲ್ಲಿ ಮುದ್ರಣ ಪ್ರಕ್ರಿಯೆ ಆರಂಭವಾಗಿತ್ತಷ್ಟೇ.<br /> ‘ನೋಟು ರದ್ದತಿಯನ್ನು ನವೆಂಬರ್ 18ರ ವೇಳೆಗೆ ಘೋಷಿಸುವ ಆಲೋಚನೆ ಇತ್ತು. ಆದರೆ ವಿಚಾರ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆ ಇತ್ತು’ ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಒಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ನೋಟು ರದ್ದು ಮಾಡುವ ಯೋಜನೆ ಜಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಂಬಿಕಸ್ಥ ಅಧಿಕಾರಿಯೊಬ್ಬರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಅಧಿಕಾರಿ ಬಗ್ಗೆ ಆರ್ಥಿಕ ವಲಯದವರನ್ನು ಹೊರತುಪಡಿಸಿದರೆ, ಇತರರಿಗೆ ಹೆಚ್ಚಾಗಿ ತಿಳಿದಿಲ್ಲ.<br /> <br /> ಈ ಅಧಿಕಾರಿಯ ಹೆಸರು ಹಸ್ಮುಖ್ ಅಧಿಯಾ. ಅಧಿಯಾ ಹಾಗೂ ಇತರ ಐದು ಜನರಿಗೆ ನೋಟು ರದ್ದತಿ ಬಗ್ಗೆ ಮಾಹಿತಿ ಇತ್ತು. ಆದರೆ, ಅವರು ಈ ಗುಟ್ಟು ಬಿಟ್ಟುಕೊಡದಿರುವ ಶಪಥ ಮಾಡಿದ್ದರು ಎನ್ನುತ್ತವೆ ಮೂಲಗಳು.<br /> <br /> ಈ ಆರು ಜನರಿಗೆ ಯುವಕರ ಇನ್ನೊಂದು ತಂಡ ಸಹಾಯ ಮಾಡುತ್ತಿತ್ತು. ಯುವ ತಂಡವು ಪ್ರಧಾನಿಯವರ ನವದೆಹಲಿ ನಿವಾಸದ ಎರಡು ಕೊಠಡಿಗಳಲ್ಲಿ ಕೆಲಸ ಮಾಡುತ್ತಿತ್ತು.<br /> <br /> ನೋಟು ರದ್ದತಿ ವಿಚಾರದಲ್ಲಿ ಈಗ ಗೊತ್ತಾಗಿರುವ ಸಂಗತಿಗಳು, ಮೋದಿ ಅವರು ಎಲ್ಲದರ ಮೇಲ್ವಿಚಾರಣೆಯನ್ನು ತಾವೇ ನಡೆಸುತ್ತಿದ್ದರು ಎಂದು ಹೇಳುತ್ತವೆ. ಅಲ್ಲದೆ, ಕ್ಲಿಷ್ಟಕರ ನಿರ್ಧಾರಗಳನ್ನೂ ಅವರು ತ್ವರಿತವಾಗಿ ಕೈಗೊಳ್ಳುತ್ತಿದ್ದರು ಎಂಬದು ಗೊತ್ತಾಗುತ್ತದೆ.<br /> <br /> ಈ ನಿರ್ಧಾರ ಕೈಗೊಳ್ಳುವಾಗ ಪ್ರಧಾನಿ ಮೋದಿ ಅವರು ತಮ್ಮ ವೈಯಕ್ತಿಕ ಪ್ರತಿಷ್ಠೆ ಹಾಗೂ ಜನಪ್ರಿಯತೆಯನ್ನು ಪಣಕ್ಕಿಟ್ಟಿದ್ದರು ಎಂದು ಮೂಲಗಳು ಹೇಳಿವೆ.<br /> <br /> ‘ನಾನು ಎಲ್ಲ ರೀತಿಯಿಂದ ಪರಿಶೀಲನೆ ನಡೆಸಿದ್ದೇನೆ. ಈ ಕೆಲಸದಲ್ಲಿ ಸೋಲು ಎದುರಾದರೆ, ದೂಷಣೆಯನ್ನು ನಾನೇ ಎದುರಿಸುವೆ’ ಎಂದು ಮೋದಿ ಅವರು ನೋಟು ರದ್ದತಿಗೆ ಕೆಲವೇ ಗಂಟೆಗಳ ಮೊದಲು ನಡೆದ ಸಂಪುಟ ಸಭೆಯಲ್ಲಿ ಹೇಳಿದ್ದರು ಎಂಬುದನ್ನು ಮೂರು ಜನ ಕೇಂದ್ರ ಸಚಿವರು ತಿಳಿಸಿದ್ದಾರೆ.<br /> <br /> ನೋಟು ರದ್ದತಿ ಕಾರ್ಯಕ್ರಮದ ಉಸ್ತುವಾರಿಯನ್ನು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಅಧಿಯಾ ನೋಡಿಕೊಳ್ಳುತ್ತಿದ್ದರು.<br /> ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಧಿಯಾ ಅವರು 2003ರಿಂದ 2006ರವರೆಗೆ ಅಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆ ಅವಧಿಯಲ್ಲಿ ಅಧಿಯಾ, ಮೋದಿ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು.<br /> <br /> ಅಧಿಯಾ ಅವರನ್ನು 2015ರಲ್ಲಿ ಕೇಂದ್ರ ಕಂದಾಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧೀನದಲ್ಲಿದ್ದರು. ಆದರೆ ಆಗಲೂ ಅಧಿಯಾ ಅವರು ಪ್ರಧಾನಿ ಮೋದಿ ಜೊತೆ ನೇರ ಸಂಪರ್ಕ ಹೊಂದಿದ್ದರು. ಇವರಿಬ್ಬರು ಭೇಟಿಯಾದಾಗ, ಗುಜರಾತಿ ಭಾಷೆಯಲ್ಲಿ ಚರ್ಚಿಸುತ್ತಿದ್ದರು.<br /> <br /> ಕಪ್ಪುಹಣದ ತಡೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮೋದಿ ಅವರು ಹಣಕಾಸು ಇಲಾಖೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಧಿಕಾರಿಗಳು ಹಾಗೂ ಆರ್ಥಿಕ ತಜ್ಞರ ಮೂಲಕ ಅಧ್ಯಯನ ನಡೆಸಿದ್ದರು ಎಂದು ಮೂಲಗಳು ವಿವರಿಸಿವೆ.<br /> <br /> ‘ಎಷ್ಟು ತ್ವರಿತವಾಗಿ ಹೊಸ ನೋಟುಗಳನ್ನು ಮುದ್ರಿಸುವ ಸಾಮರ್ಥ್ಯ ದೇಶಕ್ಕಿದೆ? ಹೊಸದಾಗಿ ಮುದ್ರಿಸುವ ನೋಟುಗಳನ್ನು ದೇಶದೆಲ್ಲೆಡೆ ತಲುಪಿಸುವುದು ಹೇಗೆ? ಠೇವಣಿ ಹರಿದುಬಂದರೆ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಒಳ್ಳೆಯದಾಗುತ್ತದೆಯೇ? ನೋಟು ರದ್ದತಿ ತೀರ್ಮಾನದಿಂದ ಲಾಭ ಆಗುವುದು ಯಾರಿಗೆ’ ಎಂಬ ಪ್ರಶ್ನೆಗಳಿಗೆ ಮೋದಿ ಅವರು ಉತ್ತರ ಬಯಸಿದ್ದರು.<br /> <br /> ಆದರೆ ಇಷ್ಟೂ ಪ್ರಶ್ನೆಗಳನ್ನು ಒಬ್ಬನೇ ವ್ಯಕ್ತಿಯ ಮುಂದೆ ಇಟ್ಟಿರಲಿಲ್ಲ. ಪ್ರಶ್ನೆಗಳನ್ನು ಗಮನಿಸಿ, ನೋಟು ರದ್ದತಿ ಆಲೋಚನೆ ಸರ್ಕಾರಕ್ಕೆ ಇದೆ ಎಂಬುದು ಯಾರಿಗೂ ಗೊತ್ತಾಗಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗಿತ್ತು.<br /> <br /> ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಬಗ್ಗೆ ಜನರಿಗೆ ತುಸು ಮಾಹಿತಿ ಸಿಕ್ಕಿದ್ದರೂ, ಇಡೀ ಪ್ರಯತ್ನ ನೀರಿನಲ್ಲಿ ಮಾಡಿದ ಹೋಮದಂತೆ ಆಗುತ್ತಿತ್ತು ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರು ಹೇಳಿದರು.<br /> <br /> ಅಧಿಯಾ ಉಸ್ತುವಾರಿಯಲ್ಲಿ ಸಂಶೋಧಕರ ತಂಡ ಈ ಪ್ರಶ್ನೆಗಳಿಗೆ ಕಂಡುಕೊಂಡ ಉತ್ತರಗಳನ್ನು ಒಂದೆಡೆ ಕಲೆಹಾಕಿತು. ಇದು ಒಂದರ್ಥದಲ್ಲಿ ಪ್ರಾಯೋಗಿಕವಾಗಿತ್ತು.<br /> <br /> ಯುವ ಸಂಶೋಧಕರ ತಂಡದಲ್ಲಿ ದತ್ತಾಂಶ ಹಾಗೂ ಹಣಕಾಸು ವಿಶ್ಲೇಷಕರು ಇದ್ದರು. ಇವರಲ್ಲಿ ಕೆಲವರು ಮೋದಿ ಅವರ ಸಾಮಾಜಿಕ ಜಾಲತಾಣಗಳ ಖಾತೆ ಹಾಗೂ ಅವರ ಮೊಬೈಲ್ ಆ್ಯಪ್ ನಿರ್ವಹಿಸುವವರಾಗಿದ್ದರು.<br /> <br /> ಇಷ್ಟೆಲ್ಲ ಯೋಜನೆ ರೂಪಿಸಿದರೂ, ಎದುರಾಗುವ ಎಲ್ಲ ಪರಿಸ್ಥಿತಿಗಳನ್ನು ಊಹಿಸಲು ಆಗದು ಎಂಬುದು ಮೋದಿ ಮತ್ತು ಅಧಿಯಾ ಅವರಿಗೆ ಗೊತ್ತಿತ್ತು. ಆದರೂ ಅವರು ವೇಗವಾಗಿ ಹೆಜ್ಜೆ ಹಾಕಲು ಸಿದ್ಧವಾಗಿದ್ದರು.<br /> <br /> ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ಸಾಧ್ಯ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿಶ್ಲೇಷಕರು ಏಪ್ರಿಲ್ ತಿಂಗಳಲ್ಲೇ ಹೇಳಿದ್ದರು.<br /> ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಿದ್ಧತೆ ನಡೆದಿದೆ ಎಂದು ಆರ್ಬಿಐ ಮೇ ತಿಂಗಳಲ್ಲಿ ಹೇಳಿತ್ತು. ₹ 2,000 ಮುಖಬೆಲೆಯ ನೋಟುಗಳ ವಿನ್ಯಾಸಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅದು ಆಗಸ್ಟ್ನಲ್ಲಿ ಹೇಳಿತು.<br /> <br /> ಈ ಕುರಿತು ಮಾಧ್ಯಮಗಳು ಅಕ್ಟೋಬರ್ನಲ್ಲಿ ವರದಿ ಪ್ರಕಟಿಸುವ ವೇಳೆಗೆ ನೋಟು ಮುದ್ರಣಾಲಯಗಳಲ್ಲಿ ಮುದ್ರಣ ಪ್ರಕ್ರಿಯೆ ಆರಂಭವಾಗಿತ್ತಷ್ಟೇ.<br /> ‘ನೋಟು ರದ್ದತಿಯನ್ನು ನವೆಂಬರ್ 18ರ ವೇಳೆಗೆ ಘೋಷಿಸುವ ಆಲೋಚನೆ ಇತ್ತು. ಆದರೆ ವಿಚಾರ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ಸ್ಪಷ್ಟ ಸೂಚನೆ ಇತ್ತು’ ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಒಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>