ರೇಣುಕಾ ನಿಡಗುಂದಿಯವರ ಜಾಬಾಲಿಯರ ಕಥೆ (ಪ್ರ.ವಾ., ಏ. 16) ಓದುತ್ತಿದ್ದಂತೆ ಕ್ಷಣಕಾಲ ಮನಸ್ಸಿಗೆ ಮಂಕು ಕವಿದಂತಾಗಿ ಸುಮ್ಮನೆ ಕುಳಿತುಬಿಟ್ಟೆ. ಮಾನವನು ಚಂದ್ರ ಗ್ರಹಕ್ಕೆ ಲಗ್ಗೆ ಹಾಕುತ್ತಿರುವ ಈ ಕಾಲದಲ್ಲಿ ಇಂಥದೊoದು ವಿದ್ಯಮಾನ ನಡೆಯಲು ಸಾಧ್ಯವೇ ಎಂದೆನಿಸದೇ ಇರದು.
ಒಂದೊಂದು ವಾಕ್ಯವೂ ನಾಗರಿಕ ಸಮಾಜ ಮುಟ್ಟಿ ನೋಡಿಕೊಳ್ಳುವಂತಿದೆ. ಇಂಥ ಹಲವಾರು ಅನಿಷ್ಟ ಪದ್ಧತಿಗಳನ್ನು ಬೇರು ಸಮೇತ ಕಿತ್ತೊಗೆಯದಿದ್ದರೆ ದೇಶೋದ್ಢಾರ ಎಂಬುದು ಕನಸಿನ ಮಾತೇ ಸರಿ. ನನ್ನಂತಹ ಎಷ್ಟೋ ಜನರಿಗೆ ಗೊತ್ತಿರದಿದ್ದ ಇಂಥದೊಂದು ಸಂಗತಿಯತ್ತ ಬೆಳಕು ಚೆಲ್ಲಿದ್ದಕ್ಕಾಗಿ ಲೇಖಕಿಗೂ ‘ಪ್ರಜಾವಾಣಿ’ಗೂ ಹೃದಯಪೂರ್ವಕ ಕೃತಜ್ಞತೆ.