ಕುಮಾರ ಸ್ವಾಮಿ ಬಡಾವಣೆ ಹಾಗೂ ಇಸ್ರೋ ಬಡಾವಣೆಗಳಿಗೆ ತಮ್ಮ ಜಮೀನಿಗಳನ್ನು ಕೊಟ್ಟ ರೈತರು ಜೀವನೋಪಾಯಕ್ಕಾಗಿ ಎಮ್ಮೆ, ಹಸು, ಕುರಿಗಳನ್ನು ಸಾಕುತ್ತಿದ್ದಾರೆ. ಈ ಎರಡೂ ಬಡಾವಣೆಗಳಲ್ಲಿ ಸಾಕಷ್ಟು ಖಾಲಿ ನಿವೇಶನಗಳಿವೆ. ಆದರೆ ಇದರಲ್ಲಿ ಹುಲ್ಲು, ಗಿಡ- ಗಂಟಿ ಯಥೇಚ್ಛವಾಗಿ ಬೆಳೆದಿವೆ. ಇವುಗಳನ್ನು ಮೇಯಲು ಮೂಕ ಪ್ರಾಣಿಗಳು ಬರುವುದು ಸಹಜ.