ಕಮ್ಮಾರರಿಗೆ ಎಂದು ಯಾವುದೇ ಪ್ರತ್ಯೇಕ ಯೋಜನೆಗಳಿಲ್ಲ. ಅಸಂಘಟಿತ ಕಾರ್ಮಿಕರಿಗೆ ನೀಡುವ ಎಲ್ಲ ಸವಲತ್ತುಗಳನ್ನೂ ಅವರಿಗೂ ನೀಡಲಾಗುತ್ತಿದೆ.–ಸಂತೋಷ್ ಲಾಡ್, ಕಾರ್ಮಿಕ ಸಚಿವ
ಕೋವಿಡ್ ಸಮಯದಲ್ಲಿ ಸಮಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ₹5 ಸಾವಿರ ಪರಿಹಾರದ ಜತೆಗೆ ಆಹಾರದ ಕಿಟ್ ನೀಡಿದರು. ನಮ್ಮ ಕುಲುಮೆಗಳು ಬಂದ್ ಆದರೂ ಯಾವ ನೆರವೂ ಸಿಗಲಿಲ್ಲ.--ಬಸವರಾಜ ಕಮ್ಮಾರ, ಹುನಗುಂದ ಕಮ್ಮಾರ ಸಂಘದ ಅಧ್ಯಕ್ಷ
ವಿಶ್ವಕರ್ಮರಲ್ಲಿ 41 ಉಪಜಾತಿಗಳಿದ್ದು, ಮೈಸೂರು ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಕಮ್ಮಾರರ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬಂದಿದ್ದು, ಪ್ರಸ್ತುತ 28 ಜಿಲ್ಲೆಗಳಲ್ಲಿ ಅಧ್ಯಯನ ಮುಗಿದಿದೆ. 2025ರಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.-ಕೃಷ್ಣಮೂರ್ತಿ, ಪ್ರಾಧ್ಯಾಪಕ, ಮೈಸೂರು ವಿವಿ
ಕಟ್ಟಿಗೆಯ ಚಕ್ಕಡಿಯಾದರೆ ಪ್ರತಿ ಹಂಗಾಮಿಗೂ ಸಣ್ಣಪುಟ್ಟ ಕೆಲಸಗಳು ಬರುತ್ತಿದ್ದವು. ಕಬ್ಬಿಣದ ಚಕ್ಕಡಿ ಸಿದ್ಧಗೊಂಡರೆ ಕನಿಷ್ಠ 50 ವರ್ಷ ಬಾಳಿಕೆ ಬರುತ್ತದೆ. ಹೀಗಾಗಿ, ಕುಡಗೋಲು, ಕೊಡಲಿ, ಕುಡ, ಟೇಬಲ್, ಕುರ್ಚಿ ಮುಂತಾದ ಸಣ್ಣಪುಟ್ಟ ಕೆಲಸಗಳೇ ನಮಗೆ ಜೀವನಾಧಾರ.– ಸುನೀಲ ಕಂಬಾರ, ಚಚಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.