ಬುಧವಾರ, 5 ನವೆಂಬರ್ 2025
×
ADVERTISEMENT
ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ
ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ
ಶಿಕ್ಷಣ ಸಂಸ್ಥೆಗಳ ಹಣ ದಾಹ; ಪಾಲಕರಿಗೆ ಪೆಡಂಭೂತವಾಗಿ ಕಾಡುತ್ತಿರುವ ‘ಪಿಡುಗು’
ಫಾಲೋ ಮಾಡಿ
Published 20 ಸೆಪ್ಟೆಂಬರ್ 2025, 20:44 IST
Last Updated 20 ಸೆಪ್ಟೆಂಬರ್ 2025, 20:44 IST
Comments
ಶಿಕ್ಷಣ ಹಕ್ಕು ಕಾಯ್ದೆಯ ಆಧಾರದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ಸೆಕ್ಷನ್‌– 34ರ ಪ್ರಕಾರ ಶಾಲಾ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ಮಂಡಳಿ ರಚಿಸಿ ಶಿಕ್ಷಣ ಕಾಯ್ದೆಯ ಅನುಷ್ಠಾನ ಪರಾಮರ್ಶಿಸಬೇಕು.
– ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ
ಜೀವನ ನಡೆಸಲೇ ನಾವು ಕಷ್ಟ ಅನುಭವಿಸುತ್ತಿದ್ದೇವೆ. ಆದರೆ, ನಮ್ಮಂತೆ ನಮ್ಮ ಮಕ್ಕಳು ಕಷ್ಟಪಡುವುದು ಬೇಡ ಎಂದು ಖಾಸಗಿ ಶಾಲೆಗೆ ಸೇರಿಸಿದ್ದೇವೆ. ಅಲ್ಲಿ ಒಳ್ಳೆಯ ಫಲಿತಾಂಶ ಪಡೆದವರನ್ನು ನೋಡಿದ್ದೇವೆ. ಅವರಂತೆಯೇ ನಮ್ಮ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಬೇಕು‌ ಎಂಬ ಆಸೆ ಇದೆ.
– ಶಿವಾನಂದ ಗೊರಜನವರ, ಗೋಕುಲ ನಿವಾಸಿ, ಹುಬ್ಬಳ್ಳಿ
ನಾನು ಕಲಿತದ್ದು ಸರ್ಕಾರಿ ಶಾಲೆಯಲ್ಲೇ. ನನ್ನ ಮಗನನ್ನೂ ಅದೇ ಶಾಲೆಯಲ್ಲಿ ಓದಿಸಬೇಕೆಂದಿದ್ದೆ. ನಾವು ಕಲಿಯುವಾಗ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 80 ಮಕ್ಕಳಿದ್ದಾರೆ. ಒಂದರಿಂದ ಏಳನೇ ತರಗತಿಗೆ ಇಬ್ಬರೇ ಶಿಕ್ಷಕಿಯರಿದ್ದಾರೆ. ಇಂತಹ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಸಿಗಲು ಸಾಧ್ಯ. ಹಾಗಾಗಿ ಖಾಸಗಿ ಶಾಲೆಗೆ ಸೇರಿಸಿರುವೆ.
– ದೀಪಕ್ ಬಜಾಲ್‌, ಪಕ್ಕಲಡ್ಕ, ಮಂಗಳೂರು 
ಚಿತ್ರ: ಗುರು ನಾವಳ್ಳಿ

ಚಿತ್ರ: ಗುರು ನಾವಳ್ಳಿ

ಅಕ್ಕಪಕ್ಕದ ಮನೆಯವರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಿದ್ದಾರೆ. ನಾವು ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಅವರು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕೆ ಇದ್ದಿದ್ದರಲ್ಲೇ ಕಡಿಮೆ ಶುಲ್ಕ ಇರುವ ಶಾಲೆಗೆ ಸೇರಿಸಿದ್ದೇವೆ.
– ಪ್ರಕಾಶ್‌ ಕುಮಾರ್‌, ಶಾಮನೂರು ನಿವಾಸಿ, ದಾವಣಗೆರೆ
ಮಧ್ಯಮ ಆದಾಯದ ಸುಳಿಯಲ್ಲಿ
ರಾಜಕೀಯ ಹಸ್ತಕ್ಷೇಪ, ಸ್ವಾಯತ್ತತೆಯ ಕೊರತೆಯಿಂದ ಭಾರತದ ಉನ್ನತ ಶಿಕ್ಷಣ ಕ್ಷೇತ್ರವು ಬಿಕ್ಕಟ್ಟಿನಲ್ಲಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಅರ್ಥಶಾಸ್ತ್ರಜ್ಞ ದೀಪಕ್‌ ನಯ್ಯರ್ ಈಚೆಗೆ ಅಭಿಪ್ರಾಯಪಟ್ಟಿದ್ದರು. ‘ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಯಿಲ್ಲದೆ ಭಾರತವು ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಆರ್ಥಿಕತೆಯ ಮಾದರಿಯಲ್ಲಿಯೇ ‘ಮಧ್ಯಮ ಆದಾಯದ ಸುಳಿ’ಗೆ ಸಿಲುಕುವ ಸಾಧ್ಯತೆಯಿದೆ. ಉನ್ನತ ಶಿಕ್ಷಣ ಪರಿವರ್ತನೆಗೊಳ್ಳದ ಹೊರತು 2047ರ ವೇಳೆಗೆ ಹೆಚ್ಚಿನ ಆದಾಯದ ಸ್ಥಿತಿಗೆ ತಲುಪುವುದು ಕಷ್ಟಸಾಧ್ಯ ಎಂದೂ ಅವರು ಹೇಳಿದ್ದರು.
ಆಗಬೇಕಿರುವುದು ಏನು?
ದೆಹಲಿ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಷ್ಟೇ ಮೂಲ ಸೌಕರ್ಯಗಳನ್ನು ಹೊಂದಿವೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೂ ಆಧುನಿಕ ಸ್ಪರ್ಶ ನೀಡಬೇಕು. ಮನಸ್ಸಿಟ್ಟು ಪಾಠ ಮಾಡುವ ಶಿಕ್ಷಕರು, ಶುದ್ಧ ಕುಡಿಯವ ನೀರು, ವಿದ್ಯಾರ್ಥಿ– ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಶಾಲಾ– ಕಾಲೇಜು ಸ್ವಚ್ಛತೆಗೆ ನೌಕರರು, ಇಂಟರ್‌ನೆಟ್‌ ಮತ್ತು ಕಂಪ್ಯೂಟರ್‌ ಇರುವ ಗ್ರಂಥಾಲಯವಿದ್ದರೆ ಲಗಾಮಿಲ್ಲದೆ ಶುಲ್ಕ ಹೇರುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬಹುದು ಎಂಬುದು ಶಿಕ್ಷಣ ತಜ್ಞರು ಹಾಗೂ ಪಾಲಕರ ಅಭಿಪ್ರಾಯ.
ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT