ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್ ಚಾಕೊಲೇಟ್ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದೆ. 20ಕ್ಕೂ ಹೆಚ್ಚು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮಾತುಕತೆ ಪ್ರಗತಿಯಲ್ಲಿದೆಎಂ.ಬಿ.ಪಾಟೀಲ ಸಚಿವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ
ಪ್ರತಿಭಾವಂತರ ವಲಸೆ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ಜಿಲ್ಲೆಯ ಮೂಲದವರು ವಾಪಸ್ ಊರಿಗೆ ಬಂದು ಉದ್ಯಮ ಆರಂಭಿಸುವಂತೆ ಪ್ರೇರೇಪಿಸಿ ಹಲವು ಸಂಘಟನೆಗಳು ಸೇರಿ ಸರಣಿ ಕಾರ್ಯಕ್ರಮ ನಡೆಸಲಾಗಿದೆಪಿ.ಬಿ.ಅಹಮ್ಮದ್ ಮುದಸ್ಸರ್ ಅಧ್ಯಕ್ಷ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಕೆಸಿಸಿಐ)
ಉತ್ತರ ಕನ್ನಡದಂತಹ ಗಡಿ ಜಿಲ್ಲೆಯಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಪರಿಸರ ಹಾನಿ ಮಾಡದ ಕೈಗಾರಿಕೆ ಸ್ಥಾಪನೆ ಆಗಬೇಕಿದೆ. ಪರಿಸರ ಉದ್ಯೋಗ ಬೇಕು ವಲಸೆ ಬೇಡ ಎಂಬ ಧ್ಯೇಯದೊಂದಿಗೆ ಸರ್ಕಾರ ಯೋಜನೆ ರೂಪಿಸಲಿಯಮುನಾ ಗಾಂವ್ಕರ ಕಾರ್ಮಿಕ ಪರ ಹೋರಾಟಗಾರ್ತಿ
ಶಿಕ್ಷಣ ಪಡೆದರೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅವಕಾಶವನ್ನೇ ಮಾಡಿಕೊಡದ ಕಾರಣದಿಂದ ಗೋವಾಕ್ಕೆ ದುಡಿಮೆಗೆ ವಲಸೆ ಹೋಗುವ ಸ್ಥಿತಿ ಸಾವಿರಾರು ಯುವಕರಿಗೆ ಬಂದಿದೆ ಸಂತೋಷಗೋವೇಕರ. ಉದ್ಯೋಗಿ ಉತ್ತರ ಕನ್ನಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.