
ಎಐ ಚಿತ್ರ: ಕಣಕಾಲಮಠ

ತೋಟದೊಳಗೆ ಕಾಡುಕೋಣಗಳ ಓಡಾಟ

ಅಡಿಕೆ ಮರದ ಬುಡವನ್ನು ಹಂದಿಗಳು ಬಗೆದಿಟ್ಟಿವೆ
ವನ್ಯಜೀವಿಗಳ ಹಾವಳಿಯಿಂದ ಬೆಳೆ ನಷ್ಟವಾದರೆ ರೈತರಿಗೆ ಪರಿಹಾರ ವಿತರಿಸಬೇಕು. ಬೇರೆ ವಿಷಯದಲ್ಲಿ ಮಂಗಗಳನ್ನು ವನ್ಯಜೀವಿ ಎಂದು ಪರಿಗಣಿಸುವ ಅರಣ್ಯ ಇಲಾಖೆ ಪರಿಹಾರ ನೀಡಿಕೆ ವಿಷಯದಲ್ಲಿ ಮಾತ್ರ ಮೌನವಾಗಿರುವುದು ಯಾಕೆ?-ಲೋಕೇಶ್ ಎಂ., ನೆರಿಯ, ಬೆಳ್ತಂಗಡಿ ತಾಲ್ಲೂಕು
ಕಾಡುಪ್ರಾಣಿ ಉಪಟಳದಿಂದ ಅಡಿಕೆ ಮತ್ತು ತೆಂಗು ಫಸಲು ಹಾನಿಗೊಳಗಾದರೆ ಪರಿಹಾರ ನೀಡಲು ಅವಕಾಶ ಇಲ್ಲ. ಆನೆ ದಾಳಿಯಿಂದ ಅಡಿಕೆ ಅಥವಾ ತೆಂಗಿನ ಮರ ಧ್ವಂಸವಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ.-ಆ್ಯಂಟನಿ ಮರಿಯಪ್ಪ, ದ.ಕ. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಬೆಟ್ಟದ ತಪ್ಪಲು, ಕೆರೆ ಅಂಚಿಗಷ್ಟೇ ಸೀಮಿತವಾಗಿದ್ದ ನವಿಲುಗಳು ಈಗ ಗ್ರಾಮದ ಅರಳಿ ಕಟ್ಟೆವರೆಗೂ ಬರುತ್ತಿವೆ. ನವಿಲುಗಳ ಹಾವಳಿಯಿಂದ ಬೆಳೆಗಳನ್ನು ಯಾವ ರೀತಿ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದೇ ಈಗ ಬಯಲುಸೀಮೆ ಜಿಲ್ಲೆಗಳ ರೈತರಿಗೆ ಸವಾಲಾಗಿದೆ. ರೈತರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಬೇಕು.-ಮುತ್ತೇಗೌಡ, ರೈತ, ತಿಪ್ಪೂರು ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು
ಕಾಡಿನಲ್ಲಿ ರಾತ್ರಿ ಹೊತ್ತು ಮಂಗಗಳ ಬೇಟೆಯಾಡುವ ಚಿರತೆ, ಗಿಡುಗ, ಹೆಬ್ಬಾವುಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಮಂಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡಿನಲ್ಲಿ ಹಣ್ಣು, ಕಾಯಿ, ಎಲೆ, ಚಿಗುರು, ತೊಗಟೆಯ ಸಸ್ಯ ವೈವಿಧ್ಯ ಇಲ್ಲದೇ ಅಕೇಶಿಯಾ, ನೀಲಗಿರಿ ನೆಡುತೋಪು ಹೆಚ್ಚುತ್ತಿರುವುದು ಮಂಗಗಳು ತೋಟಗಳಿಗೆ ನುಗ್ಗಲು ಕಾರಣ.-ಅಖಿಲೇಶ್ ಚಿಪ್ಪಳಿ, ಪರಿಸರವಾದಿ
ಮಲೆನಾಡಿನಲ್ಲಿ ಮಂಗಗಳ ಉಪಟಳ ತಪ್ಪಿಸಲು ಮಂಕಿ ಪಾರ್ಕ್ ಸ್ಥಾಪಿಸಲು ಸಾಗರ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಐದು ಕಡೆ ಜಾಗ ಗುರುತಿಸಿದ್ದೆವು. ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಕಾರಣ ಯೋಜನೆ ಕೈಬಿಟ್ಟಿದ್ದೇವೆ.-ಮೋಹನ್ಕುಮಾರ್, ಸಾಗರ ವಿಭಾಗದ ಡಿಸಿಎಫ್
ಹಿಂದೆ ಪ್ರತಿ ಹಳ್ಳಿಯಲ್ಲೂ ಒಂದಷ್ಟು ಬಯಲು ಪ್ರದೇಶ ಇರುತ್ತಿತ್ತು. ಅಲ್ಲಿ ಬೇರೆಬೇರೆ ಹಣ್ಣಿನ ಗಿಡಗಳಿರುತ್ತಿದ್ದವು. ಆ ಪ್ರದೇಶಗಳೆಲ್ಲ ಈಗ ಅಡಿಕೆ, ತೆಂಗಿನ ತೋಟಗಳಾಗಿವೆ. ಕಾಡುಪ್ರಾಣಿಗಳ ಸಂತತಿಯೂ ಹಲವು ಪಟ್ಟು ಹೆಚ್ಚಿದೆ. ಇದರಿಂದ ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.-ಕೆ. ಪ್ರವೀಣ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಮಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.