

ಹನೂರು ತಾಲ್ಲೂಕಿನ ಹಾಡಿಗಳಿಗೆ ಈಚೆಗೆ ಪೂರೈಕೆ ಮಾಡಲಾಗಿರುವ ಕಲಬೆರಕೆ ಬೇಳೆ



ಚಾಮರಾಜನಗರ ಜಿಲ್ಲೆಯ ಯರಕನಗದ್ದೆ ಕಾಲೊನಿಯಲ್ಲಿ ಕುಳಿತಿರುವ ಆದಿವಾಸಿಗಳು

ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮದಡಿ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ವಿತರಿಸಿರುವ ಹೆಸರೇ ಇಲ್ಲದ ಎಲ್ಲಿಯವರೆಗೆ ಬಳಸಬಹುದು ಎನ್ನುವ ಮಾಹಿತಿಯೂ ಇಲ್ಲದ ಅಡುಗೆಎಣ್ಣೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿ ವ್ಯಾಪ್ತಿಯ ಪೋಡುಗಳಲ್ಲಿರುವ ಆದಿವಾಸಿಗಳು

‘ಸ್ಥಳೀಯವಾಗಿ ಖರೀದಿಸಿ ನೀಡಿ’
ಸ್ಥಳೀಯ ಆಹಾರ ಪದ್ಧತಿಗೆ ಒಗ್ಗಿರುವುದರಿಂದ ಸ್ಥಳೀಯವಾಗಿಯೇ ಆಹಾರ ಪದಾರ್ಥಗಳನ್ನು ಖರೀದಿಸಿ ನೀಡಬೇಕು, ಕುಚ್ಚಲಕ್ಕಿ, ಗಾಣದ ಎಣ್ಣೆ (ತೆಂಗಿನ ಎಣ್ಣೆ) ಹಾಗೂ ದವಸ ಧಾನ್ಯಗಳನ್ನೂ ನೀಡಬೇಕು.ಗಂಗಾಧರ ಗೌಡ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ
‘ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಿ’
ಪ್ರಾಚೀನ ಆಹಾರ ಪದ್ಧತಿಗೆ ಒಗ್ಗಿರುವ ಹಲವರು ಪೌಷ್ಟಿಕ ಆಹಾರ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ ಸೇವನೆಯ ಅಗತ್ಯತೆ ಹಾಗೂ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮದ್ಯವ್ಯಸನಿಗಳಿಗೆ ಕೌನ್ಸೆಲಿಂಗ್ ಮೂಲಕ ವ್ಯಸನಮುಕ್ತಗೊಳಿಸಬೇಕು, ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು.ಎಚ್.ಎಂ.ಕಾವೇರಿ, ಬುಡಕಟ್ಟು ಸಮುದಾಯದ ಪರ ಹೋರಾಟಗಾರ್ತಿ
ಸ್ಥಳೀಯವಾದ ಆಹಾರ ನೀಡಿ
ಎಲ್ಲ ಆದಿವಾಸಿಗಳಿಗೂ ಏಕರೂಪದ ಪೌಷ್ಠಿಕ ಆಹಾರ ನೀಡುವ ಬದಲಿಗೆ ಪ್ರಾದೇಶಿಕತೆಗೆ ಅನುಗುಣವಾಗಿ ಸ್ಥಳೀಯ ಆಹಾರ ಪದ್ಧತಿಯಂತೆ ನೀಡಬೇಕು. ಕಾಳಸಂತೆಯಲ್ಲಿ ಆಹಾರ ಮಾರಾಟ ಮಾಡದಂತೆ ಮನವರಿಕೆ ಮಾಡಿಕೊಡಕೊಡಬೇಕು.ವಿ.ಮುತ್ತಯ್ಯ, ರಾಜ್ಯ ಮೂಲನಿವಾಸಿ ಬುಡಗಟ್ಟುಜನರ ವೇದಿಕೆಯ ಸಂಚಾಲಕ
ಆರೋಗ್ಯ ತಪಾಸಣೆ ನಡೆಸಿ
ಸರ್ಕಾರ ವಿತರಿಸುವ ಪೌಷ್ಟಿಕ ಆಹಾರದ ಮಹತ್ವ ಹಾಗೂ ಬಳಕೆಯ ಬಗ್ಗೆ ಕೊರಗರಿಗೆ ಅರಿವಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಬಂದು ಪೌಷ್ಟಿಕ ಆಹಾರದ ಮಹತ್ವ ತಿಳಿಸಿಕೊಡಬೇಕು, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು.ಸುಶೀಲಾ ನಾಡ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ
ಮಳೆಗಾಲದಲ್ಲಿ ಪೂರೈಕೆ ವ್ಯತ್ಯಯ
‘ಮಳೆಗಾಲದಲ್ಲಿ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಸಹಜ. ಕಳೆದ ಆರು ತಿಂಗಳಿನಿಂದ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ’ವೈ.ಕೆ.ಉಮೇಶ್, ಉತ್ತರ ಕನ್ನಡ ಪರಿಶಿಷ್ಟ ವರ್ಗಗಳಕಲ್ಯಾಣ ಇಲಾಖೆ ಉಪನಿರ್ದೇಶಕ


‘ದೂರು ಬಂದರೆ ಕ್ರಮ’
ರಾಜ್ಯದ 8 ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸಲು ಮಾರ್ಚ್ನಲ್ಲಿ ಆರ್ಆರ್ ಎಂಟರ್ಪ್ರೈಸಸ್ ಸಂಸ್ಥೆಗೆ ₹ 120 ಕೋಟಿ ವೆಚ್ಚದ ಟೆಂಡರ್ ನೀಡಲಾಗಿದೆ. ನಿಯಮಿತವಾಗಿ ಆಹಾರ ಪದಾರ್ಥಗಳು ವಿತರಣೆಯಾಗದ ಹಾಗೂ ಕಳಪೆ ಆಹಾರ ಪೂರೈಕೆ ಮಾಡಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಲಾಗುವುದು. ಸುರೇಶ್, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ
ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ
ಗುಣಮಟ್ಟ ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ ಮಾಡಲಾಗುವುದು, ಫಲಾನುಭವಿಗಳ ಬೇಡಿಕೆಯಂತೆ ಸಫಲ್ ಅಡುಗೆ ಎಣ್ಣೆ ಪೂರೈಕೆ ಮಾಡಲಾಗುತ್ತಿದೆ. ವಿತರಣೆಗೆ ಬಾಕಿ ಇರುವ ಆಹಾರ ಪದಾರ್ಥಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು.ಮುನಿರಾಜು, ಆರ್ಆರ್ ಎಂಟರ್ಪ್ರೈಸಸ್ ಆಹಾರ ಪೂರೈಕೆದಾರರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.