ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ಒಳನೋಟ: ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ
ಒಳನೋಟ: ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ
ಪೌಷ್ಟಿಕ ಆಹಾರ: ಯೋಜನೆಗೆ ‘ಅಪೌಷ್ಟಿಕತೆ’, ಮುಗ್ಗುಲು ಬೇಳೆ, ಕಡಲೆಬೀಜ ಪೂರೈಕೆ
ಫಾಲೋ ಮಾಡಿ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
Comments
ಹನೂರು ತಾಲ್ಲೂಕಿನ ಹಾಡಿಗಳಿಗೆ ಈಚೆಗೆ ಪೂರೈಕೆ ಮಾಡಲಾಗಿರುವ ಕಲಬೆರಕೆ ಬೇಳೆ

ಹನೂರು ತಾಲ್ಲೂಕಿನ ಹಾಡಿಗಳಿಗೆ ಈಚೆಗೆ ಪೂರೈಕೆ ಮಾಡಲಾಗಿರುವ ಕಲಬೆರಕೆ ಬೇಳೆ

ಸಂಶಯಾಸ್ಪದ ವರದಿ: 
ಕಲಬೆರಕೆ ಅಡುಗೆ ಎಣ್ಣೆ ವಿತರಣೆ ಆರೋಪದ ಹಿನ್ನೆಲೆಯಲ್ಲಿ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿಗಳು ಮೇ 23ರಂದು ಅಡುಗೆ ಎಣ್ಣೆ ಮಾದರಿಯನ್ನು ಮೈಸೂರಿನ ವಿಭಾಗೀಯ ಆಹಾರ ಪ್ರಯೋಗಾಲಯಕ್ಕೆ ಕಳಿಸಿದ್ದರು. ಪರೀಕ್ಷೆಗೊಳಪಡಿಸಿದ ಮುಖ್ಯ ಆಹಾರ ವಿಶ್ಲೇಷಕರು ನೀಡಿರುವ ವರದಿ ಬುಡಕಟ್ಟು ಸಮುದಾಯಗಳ ಜನರಲ್ಲಿ ಅಚ್ಚರಿ ಉಂಟುಮಾಡಿದೆ.
ಚಾಮರಾಜನಗರ ಜಿಲ್ಲೆಯ ಯರಕನಗದ್ದೆ ಕಾಲೊನಿಯಲ್ಲಿ ಕುಳಿತಿರುವ ಆದಿವಾಸಿಗಳು

ಚಾಮರಾಜನಗರ ಜಿಲ್ಲೆಯ ಯರಕನಗದ್ದೆ ಕಾಲೊನಿಯಲ್ಲಿ ಕುಳಿತಿರುವ ಆದಿವಾಸಿಗಳು

ಜನರ ಸವಾಲು: 
ಮುಗ್ಗುಲು ಹಿಡಿದು ಬೇಳೆ ಕಾಳುಗಳು, ದುರ್ವಾಸನೆ ಬೀರುವ ಅಡುಗೆ ಎಣ್ಣೆ ಬಳಕೆಗೆ ಯೋಗ್ಯ ಎಂದಾದರೆ ಅಧಿಕಾರಿಗಳೇ ನಮಗೆ ನೀಡಿರುವ ಆಹಾರ ಪದಾರ್ಥಗಳನ್ನು ತಿಂದು ಇವೆಲ್ಲಾ ಒಳ್ಳೆಯ ಗುಣಮಟ್ಟದಿಂದ ಇದೆ ಎಂದು ಸಾಬೀತು ಪಡಿಸಲಿ. ಅಧಿಕಾರಿಗಳು ಪ್ರಯೋಗಾಲಯಕ್ಕೆ ಕಳಪೆ ಆಹಾರದ ಮಾದರಿಗಳ ಬದಲಾಗಿ ಬೇರೆ ಬದಲಿ ಮಾದರಿಗಳನ್ನು ಕಳುಹಿಸಿರುವ ಅನುಮಾನವಿದೆ ಎಂದು ಸಂಶಯ ವ್ಯಕ್ತಪಡಿಸುತ್ತಾರೆ ಆದಿವಾಸಿ ಸಮುದಾಯದ ಮುಖಂಡ ಸಿ.ಮಾದೇಗೌಡ.
ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮದಡಿ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ವಿತರಿಸಿರುವ ಹೆಸರೇ ಇಲ್ಲದ ಎಲ್ಲಿಯವರೆಗೆ ಬಳಸಬಹುದು ಎನ್ನುವ ಮಾಹಿತಿಯೂ ಇಲ್ಲದ ಅಡುಗೆಎಣ್ಣೆ.

ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮದಡಿ ಚಾಮರಾಜನಗರ ಜಿಲ್ಲೆಯ ಬುಡಕಟ್ಟು ಸಮುದಾಯಗಳಿಗೆ ವಿತರಿಸಿರುವ ಹೆಸರೇ ಇಲ್ಲದ ಎಲ್ಲಿಯವರೆಗೆ ಬಳಸಬಹುದು ಎನ್ನುವ ಮಾಹಿತಿಯೂ ಇಲ್ಲದ ಅಡುಗೆಎಣ್ಣೆ.

ಜಿಲ್ಲಾ ಸಮಿತಿಯ ಅಧಿಕಾರ ಮೊಟಕು: 
ಸರ್ಕಾರದ ಮಹತ್ವಾಕಾಂಕ್ಷಿ ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮ ಹಳಿತಪ್ಪಲು ಟೆಂಡರ್ ಪ್ರಕ್ರಿಯೆಯಲ್ಲಿ ಆಗಿರುವ ಬದಲಾವಣೆ ಹಾಗೂ ಜಿಲ್ಲಾ ಸಮಿತಿಯ ಅಧಿಕಾರ ಮೊಟಕುಗೊಳಿಸಿರುವುದು ಪ್ರಮುಖ ಕಾರಣ ಎಂದು ಆರೋಪಗಳು ಕೇಳಿಬಂದಿವೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿ ವ್ಯಾಪ್ತಿಯ ಪೋಡುಗಳಲ್ಲಿರುವ ಆದಿವಾಸಿಗಳು

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಬೆಟ್ಟ ಪಂಚಾಯಿತಿ ವ್ಯಾಪ್ತಿಯ ಪೋಡುಗಳಲ್ಲಿರುವ ಆದಿವಾಸಿಗಳು

ಮೂರ್ನಾಲ್ಕು ತಿಂಗಳ ಕಿಟ್ ವಿತರಣೆ:
‌ಅಪೌಷ್ಟಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಪೌಷ್ಟಿಕ ಆಹಾರದ ಹೆಸರಿನಲ್ಲಿ ಕಳಪೆ ಆಹಾರ ನೀಡಿದರೆ ಅವರ ಆರೋಗ್ಯ ಮತ್ತಷ್ಟು ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ ಗೌಡ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಯರಕನಗದ್ದೆ ಕಾಲೋನಿ
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಯರಕನಗದ್ದೆ ಕಾಲೋನಿ
‘ಸ್ಥಳೀಯವಾಗಿ ಖರೀದಿಸಿ ನೀಡಿ’
ಸ್ಥಳೀಯ ಆಹಾರ ಪದ್ಧತಿಗೆ ಒಗ್ಗಿರುವುದರಿಂದ ಸ್ಥಳೀಯವಾಗಿಯೇ ಆಹಾರ ಪದಾರ್ಥಗಳನ್ನು ಖರೀದಿಸಿ ನೀಡಬೇಕು, ಕುಚ್ಚಲಕ್ಕಿ, ಗಾಣದ ಎಣ್ಣೆ (ತೆಂಗಿನ ಎಣ್ಣೆ) ಹಾಗೂ ದವಸ ಧಾನ್ಯಗಳನ್ನೂ ನೀಡಬೇಕು.
ಗಂಗಾಧರ ಗೌಡ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ
‘ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಿ’
ಪ್ರಾಚೀನ ಆಹಾರ ಪದ್ಧತಿಗೆ ಒಗ್ಗಿರುವ ಹಲವರು ಪೌಷ್ಟಿಕ ಆಹಾರ ಸೇವನೆ ಮಾಡುವುದಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ ಸೇವನೆಯ ಅಗತ್ಯತೆ ಹಾಗೂ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮದ್ಯವ್ಯಸನಿಗಳಿಗೆ ಕೌನ್ಸೆಲಿಂಗ್ ಮೂಲಕ ವ್ಯಸನಮುಕ್ತಗೊಳಿಸಬೇಕು, ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು.
ಎಚ್.ಎಂ.ಕಾವೇರಿ, ಬುಡಕಟ್ಟು ಸಮುದಾಯದ ಪರ ಹೋರಾಟಗಾರ್ತಿ 
ಸ್ಥಳೀಯವಾದ ಆಹಾರ ನೀಡಿ
ಎಲ್ಲ ಆದಿವಾಸಿಗಳಿಗೂ ಏಕರೂಪದ ‍ಪೌಷ್ಠಿಕ ಆಹಾರ ನೀಡುವ ಬದಲಿಗೆ ಪ್ರಾದೇಶಿಕತೆಗೆ ಅನುಗುಣವಾಗಿ ಸ್ಥಳೀಯ ಆಹಾರ ಪದ್ಧತಿಯಂತೆ ನೀಡಬೇಕು. ಕಾಳಸಂತೆಯಲ್ಲಿ ಆಹಾರ ಮಾರಾಟ ಮಾಡದಂತೆ ಮನವರಿಕೆ ಮಾಡಿಕೊಡಕೊಡಬೇಕು.   
ವಿ.ಮುತ್ತಯ್ಯ, ರಾ‌ಜ್ಯ ಮೂಲನಿವಾಸಿ ಬುಡಗಟ್ಟುಜನರ ವೇದಿಕೆಯ ಸಂಚಾಲಕ
ಆರೋಗ್ಯ ತಪಾಸಣೆ ನಡೆಸಿ
ಸರ್ಕಾರ ವಿತರಿಸುವ ಪೌಷ್ಟಿಕ ಆಹಾರದ ಮಹತ್ವ ಹಾಗೂ ಬಳಕೆಯ ಬಗ್ಗೆ ಕೊರಗರಿಗೆ ಅರಿವಿಲ್ಲ. ಅಧಿಕಾರಿಗಳು ಹಾಡಿಗಳಿಗೆ ಬಂದು ಪೌಷ್ಟಿಕ ಆಹಾರದ ಮಹತ್ವ ತಿಳಿಸಿಕೊಡಬೇಕು, ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು.‌
ಸುಶೀಲಾ ನಾಡ, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ
ಮಳೆಗಾಲದಲ್ಲಿ ಪೂರೈಕೆ ವ್ಯತ್ಯಯ
‘ಮಳೆಗಾಲದಲ್ಲಿ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಸಹಜ. ಕಳೆದ ಆರು ತಿಂಗಳಿನಿಂದ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ’
ವೈ.ಕೆ.ಉಮೇಶ್, ಉತ್ತರ ಕನ್ನಡ ಪರಿಶಿಷ್ಟ ವರ್ಗಗಳಕಲ್ಯಾಣ ಇಲಾಖೆ ಉಪನಿರ್ದೇಶಕ
77 ಮಂದಿಗೆ ಸಿಕಲ್‌ಸೆಲ್‌ ರೋಗ
ಚಾಮರಾಜನಗರ ಜಿಲ್ಲೆಯಲ್ಲಿ 77 ಮಂದಿ ಆದಿವಾಸಿಗಳು ಕುಡುಗೋಲು (ಸಿಕಲ್‌ಸೆಲ್‌) ಕಾಯಿಲೆಯಿಂದ ಬಳಲುತ್ತಿದ್ದಾರೆ. 1,000 ಮಂದಿಯಲ್ಲಿ ರೋಗವಾಹಕರು ಇದ್ದಾರೆ. ರಕ್ತಹೀನತೆ, ಮಧುಮೇಹ, ರಕ್ತದೊತ್ತಡದಂತೆ ಅಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವ ಬುಡಕಟ್ಟು ಸಮುದಾಯಗಳ ಜನರಿಗೆ ಅಪೌಷ್ಟಿಕ ಆಹಾರ ಪೂರೈಕೆಯಾಗುತ್ತಿರುವುದು ಆರೋಗ್ಯ ಸಮಸ್ಯೆಗಳು ಮತ್ತಷ್ಟು ಗಂಭೀರವಾಗಲು ಕಾರಣವಾಗಿದೆ.
‘ದೂರು ಬಂದರೆ ಕ್ರಮ’
ರಾಜ್ಯದ 8 ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳಿಗೆ ಪ್ರತಿ ತಿಂಗಳು ಪೌಷ್ಟಿಕ ಆಹಾರದ ಕಿಟ್‌ಗಳನ್ನು ವಿತರಿಸಲು ಮಾರ್ಚ್‌ನಲ್ಲಿ ಆರ್‌ಆರ್‌ ಎಂಟರ್‌ಪ್ರೈಸಸ್‌ ಸಂಸ್ಥೆಗೆ ₹ 120 ಕೋಟಿ ವೆಚ್ಚದ ಟೆಂಡರ್ ನೀಡಲಾಗಿದೆ. ನಿಯಮಿತವಾಗಿ ಆಹಾರ ಪದಾರ್ಥಗಳು ವಿತರಣೆಯಾಗದ ಹಾಗೂ ಕಳಪೆ ಆಹಾರ ಪೂರೈಕೆ ಮಾಡಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಲಾಗುವುದು. ‍
ಸುರೇಶ್‌, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ‌
ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ
ಗುಣಮಟ್ಟ ಕಳಪೆಯಾಗಿದ್ದರೆ ಬದಲಿ ಆಹಾರ ಪೂರೈಕೆ ಮಾಡಲಾಗುವುದು, ಫಲಾನುಭವಿಗಳ ಬೇಡಿಕೆಯಂತೆ ಸಫಲ್ ಅಡುಗೆ ಎಣ್ಣೆ ಪೂರೈಕೆ ಮಾಡಲಾಗುತ್ತಿದೆ. ವಿತರಣೆಗೆ ಬಾಕಿ ಇರುವ ಆಹಾರ ಪದಾರ್ಥಗಳನ್ನು ಶೀಘ್ರ ಹಂಚಿಕೆ ಮಾಡಲಾಗುವುದು.
ಮುನಿರಾಜು, ಆರ್‌ಆರ್‌ ಎಂಟರ್‌ಪ್ರೈಸಸ್‌ ಆಹಾರ ಪೂರೈಕೆದಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT