ಎಲ್ಲ ಗ್ರಾಮಕ್ಕೂ ಬಸ್ ಓಡಿಸಿ
ನಂಜುಂಡಪ್ಪ ವರದಿ ಪ್ರಕಾರ ಮಧುಗಿರಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿ ಸೇರಿದೆ. ಈ ತಾಲ್ಲೂಕಿನ ಹೆಚ್ಚಿನ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಸೇರಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಬುಧವಾರದ ಸಂತೆಯಂದು, ರೈತರು ದವಸ–ಧಾನ್ಯ, ತರಕಾರಿ ಸಾಗಿಸುವುದು ಕಷ್ಟವಾಗಿದೆ. ತಾಲ್ಲೂಕಿನಲ್ಲಿ ಸಾರಿಗೆ ಘಟಕ ಸ್ಥಾಪಿಸಿ, ಎಲ್ಲ ಗ್ರಾಮಗಳಿಗೂ ಬಸ್ ಓಡಿಸಬೇಕು.Last Updated 9 ಡಿಸೆಂಬರ್ 2013, 19:30 IST