ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಭಾರತವನ್ನು ‘ವಿಕಸಿತ ಭಾರತ’ವಾಗಿ ರೂಪಿಸುವುದು ಸರ್ಕಾರದ ಗುರಿ. ಬಡವರು, ಯುವಜನರು, ರೈತರು ಹಾಗೂ ಮಹಿಳೆಯರೇ ಈ ವಿಕಸಿತ ಭಾರತದ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಜವಳಿ ವಲಯವು ಈ ನಾಲ್ಕು ವರ್ಗಗಳೊಟ್ಟಿಗೆ ಸಂಪರ್ಕ ಬೆಸೆದುಕೊಂಡಿದೆ. ಹಾಗಾಗಿ, ಭಾರತ್ ಟೆಕ್ಸ್ ಕಾರ್ಯಕ್ರಮವು ನಮಗೆ ಬಹುಮುಖ್ಯವಾಗಿದೆ ಎಂದು ತಿಳಿಸಿದರು.