ಹೊಸ ಯೋಜನೆ ಉದ್ಘಾಟನೆ, ಹೊಸ ರೈಲು, ರೈಲು ಮಾರ್ಗಗಳಿಗೆ ಹಸಿರು ನಿಶಾನೆ ನೀಡುವ ಸಂದರ್ಭದಲ್ಲಿ ರೈಲ್ವೆ ಇಲಾಖೆ ನೀಡುವ ಜಾಹೀರಾತುಗಳಲ್ಲಿ ಗಣ್ಯ ಅತಿಥಿಗಳು, ಸಂಸದರು, ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಹೆಸರಿನ ದೊಡ್ಡ ಪಟ್ಟಿಯೇ ಇರುತ್ತದೆ. ಇನ್ನು ಮುಂದೆ ಜಾಹೀರಾತುಗಳಲ್ಲಿ ಉದ್ಘಾಟಕರ ಹೆಸರು ಮಾತ್ರ ಕಾಣಿಸಿಕೊಳ್ಳುತ್ತದೆ. ಅನವಶ್ಯಕ ಹೆಸರುಗಳಿಗೆ ಕತ್ತರಿ ಹಾಕಿ, ಆ ಜಾಗದಲ್ಲಿ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿ ನೀಡುವಂತೆ ಇಲಾಖೆಯ ಮಾಹಿತಿ ಮತ್ತು ಪ್ರಸಾರ ವಿಭಾಗ ಎಲ್ಲ ವಲಯ ಕಚೇರಿಗಳಿಗೂ ಸುತ್ತೋಲೆ ಕಳಿಸಿದೆ.