ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 14 ಭಾನುವಾರ 2024–ಇಂದು ಈ ರಾಶಿಯವರಿಗೆ ತೀರ್ಥಕ್ಷೇತ್ರ ದರ್ಶನ
Published 13 ಜನವರಿ 2024, 18:47 IST
ಪ್ರಜಾವಾಣಿ ವಿಶೇಷ
author
ಮೇಷ
ಕೆಲಸದಲ್ಲಿ ನೀವು ಸಾಗುತ್ತಿರುವ ಮಾರ್ಗವು ಸರಿಯಾಗಿದೆ ಎಂಬ ದೃಢತೆ ನಿಮಗೆ ಬರಲಿದೆ. ಕಲಿತ ವಿದ್ಯೆಯನ್ನು ಬಳಸಿಕೊಳ್ಳುವ ಬಗ್ಗೆ ನಿಮ್ಮ ಪ್ರಯತ್ನವಿರಲಿ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರಿಗಳ ಭಯ ಎದುರಾಗಲಿದೆ.
ವೃಷಭ
ಬೇಕರಿ ವಸ್ತುಗಳು ಹಾಗೂ ಸಿಹಿ ಪದಾರ್ಥಗಳ ಮಾರಾಟದಿಂದ ಅಧಿಕ ಲಾಭ ಸಿಗಲಿದೆ. ಯಶಸ್ಸಿನ ಹೊಸ ಮಾರ್ಗಗಳು ನಿಮಗೆ ಇಂದು ಅರಿವಿಗೆ ಬರಲಿವೆ. ಹೊಸ ವಿಷಯಗಳ ಕಲಿಕೆಗೆ ಇಂದು ಸುಗಮ.
ಮಿಥುನ
ನಿರುದ್ಯೋಗಸ್ಥರಿಗೆ ಹೊರ ರಾಜ್ಯವೊಂದರಲ್ಲಿ ಕೆಲಸ ನಿರ್ವಹಿಸುವ ಅವಕಾಶ ಎದುರಾದರೆ ಒಪ್ಪಿಕೊಳ್ಳಬೇಕು. ಅನಗತ್ಯ ವಸ್ತುಗಳ ಖರೀದಿಯಿಂದ ಹೆಚ್ಚು ವೆಚ್ಚವಾಗಲಿದೆ. ಧಾರ್ಮಿಕ ವಿಚಾರಗಳಲ್ಲಿ ಶ್ರದ್ಧೆ ಮೂಡುವುದು.
ಕರ್ಕಾಟಕ
ಸವಾಲೊಡ್ಡುವ ಸನ್ನಿವೇಶಗಳು ಸಹೋದರಿ ಅಥವಾ ಭಾವನಿಂದ ಎದುರಾಗಬಹುದು. ಸಹೋದರರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷ ಇರಲಿದೆ. ತೀರ್ಥಕ್ಷೇತ್ರದ ದರ್ಶನದ ಯೋಗ ಕೂಡಿಬರುವುದು.
ಸಿಂಹ
ನಿಮ್ಮಲ್ಲಿರುವ ಸೃಜನಾತ್ಮಕ ಕಲ್ಪನೆಯನ್ನು ನಿಮ್ಮ ಸ್ವಾರ್ಥಕ್ಕಾಗಿ ಅಲ್ಲದೇ, ಸೂಕ್ತ ಹಾದಿಯಲ್ಲಿ ಬಳಸಿಕೊಳ್ಳಿ. ಸಹೋದ್ಯೋಗಿಯೊಬ್ಬರ ನೆರವಿನಿಂದ ಕೆಲಸ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿವೆ.
ಕನ್ಯಾ
ಕೆಲಸವನ್ನು ಮುಂದೂಡುವ ಅಭ್ಯಾಸ ಕಡಿಮೆ ಮಾಡಿಕೊಂಡರೆ ಒಳಿತು. ಆದಾಯದಲ್ಲಿ ವೃದ್ಧಿ ಕಂಡರೂ ನೆಮ್ಮದಿಯ ಕೊರತೆ ಎದ್ದುಕಾಣಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ನಡೆಸುವ ಅಗತ್ಯವಿದೆ.
ತುಲಾ
ಸ್ನೇಹಿತರೊಂದಿಗಿನ ಹೆಚ್ಚಿನ ಒಡನಾಟದಿಂದ ಭವಿಷ್ಯ ಹಾಳಾಗುವ ಸಾಧ್ಯತೆ ಇದೆ. ವೈದ್ಯಕೀಯ ಖರ್ಚು ಹೆಚ್ಚಲಿದೆ. ಸಂತಾನದ ಅಪೇಕ್ಷಿಗಳಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಅನಿರೀಕ್ಷಿತವಾಗಿ ಉಡುಗೊರೆ ಸಿಗಲಿದೆ.
ವೃಶ್ಚಿಕ
ಕೃಷಿ ಸಂಬಂಧಿತ ಕಾರ್ಯಕ್ರಮಗಳು ವೇಗದಲ್ಲಿ ಸಾಗಲಿವೆ. ತಂದೆಯ ಆರೋಗ್ಯ ಸುಧಾರಣೆಯಾಗಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಪಶುಸಂಗೋಪನೆ ಮತ್ತು ಹಾಲು ಉತ್ಪನ್ನಗಳಿಂದ ಲಾಭ ಸಿಗಲಿದೆ.
ಧನು
ಜೀವನೋಪಾಯಕ್ಕೆ ರಾಜಾಶ್ರಯದಂತಹ ಪರ್ಯಾಯ ವ್ಯವಸ್ಥೆ ಪ್ರಾಪ್ತಿಯಾಗಲಿದೆ. ಹಕ್ಕಿಯಂತೆ ಹಾರಾಡುವ ಆಸೆ ತಪ್ಪಲ್ಲ. ಆದರೆ ಸಾಧಕ–ಬಾಧಕ ಅರಿತು ಹೆಜ್ಜೆ ಇಟ್ಟರೆ ಕ್ಷೇಮ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ.
ಮಕರ
ಬಟ್ಟೆ ವ್ಯಾಪಾರಿಗಳಿಗೆ ರೇಷ್ಮೆ ಮತ್ತು ಹತ್ತಿ ಬಟ್ಟೆ ಮೇಲೆ ಅಧಿಕ ಬಂಡವಾಳ ಹೂಡುವ ಯೋಚನೆ ಬರಲಿದೆ. ಈ ಹೊಸ ಯೋಜನೆಗಳ ಬಗೆಗೆ ವ್ಯಾವಹಾರಿಕ ಸ್ನೇಹಿತರಲ್ಲಿ ಚರ್ಚಿಸಿ. ಹೊಸ ವಾಹನ ಖರೀದಿಸುವ ಯೋಗವಿದೆ.
ಕುಂಭ
ನಿಶ್ಚಿತ ಯೋಜನೆಗಳಿಗೆ ಸಿದ್ಧತೆಗಳೊಡನೆ ಸನ್ನದ್ಧರಾಗುವ ಬಗ್ಗೆ ಹೆಚ್ಚಿನ ಗಮನವಿರಲಿ. ಎಲ್ಲರನ್ನೂ ನಂಬುವ ನಿಮ್ಮ ದೌರ್ಬಲ್ಯದಿಂದ ತೊಂದರೆಯೇ ಹೆಚ್ಚು. ಮಕ್ಕಳ ಆರೋಗ್ಯದ ಕಡೆ ಗಮನವಹಿಸಿ.
ಮೀನ
ಇನ್ನೊಬ್ಬರ ಕಷ್ಟಗಳಿಗೆ ಸಹಕರಿಸುವ ಸಮಯದಲ್ಲಿ ನಿಮ್ಮ ಸ್ವಾರ್ಥವನ್ನು ಬಳಸಿಕೊಳ್ಳಬೇಡಿ. ಆ ಕೆಲಸವನ್ನು ದೇವರು ಮೆಚ್ಚುವುದಿಲ್ಲ. ವಿವಿಧ ರೀತಿಯ ಬರವಣಿಗೆ ಮುಖಾಂತರ ಹೆಚ್ಚುವರಿ ಆದಾಯ ಬರಲಿದೆ.