ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಸ್ನೇಹಗಳು ನೂತನ ಸಂಬಂಧಗಳಿಗೆ ದಾರಿಯಾಗಲಿದೆ
Published 26 ಮಾರ್ಚ್ 2024, 21:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಮರ್ಥ್ಯವು ಉತ್ತಮ ಯೋಜನೆಗೆ ಬಳಕೆಯಾಗುವಂತೆ ನಡೆ ಇರಲಿ. ಅನಿರೀಕ್ಷಿತ ಹಾಗು ಅಪರಿಚಿತ ಕೆಲಸಗಳು ಕೈಸೇರಿ ಅವುಗಳನ್ನು ನಿಭಾಯಿಸಲೇಬೇಕಾದ ಅನಿವಾರ್ಯತೆ ಎದುರಾಗಬಹುದು.
ವೃಷಭ
ಇಂದಿನ ದಿನದವರೆಗೂ ಜೀವನದಲ್ಲಿ ಬೇರೆಯವರ ಹಿಡಿತದಿಂದ ಬಳಲಿರುವ ಸಮಸ್ಯೆಯಿಂದ ಹೊರಬರುವ ಅವಕಾಶಗಳು ಎದುರಾಗುವುದು. ಹೆಂಡತಿಗೆ ಉದ್ಯೋಗ ದೊರೆತು ಸಂತೋಷವಾಗುವುದು.
ಮಿಥುನ
ಭವಿಷ್ಯದ ಬಗ್ಗೆ ಅನಗತ್ಯ ಚಿಂತಿಸುವುದನ್ನು ಬಿಟ್ಟು ಈಗಿನ ಅಗತ್ಯಗಳನ್ನು ಪೂರೈಸಿಕೊಳ್ಳುವ ಕಡೆಗೆ ಗಮನಹರಿಸಿ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ವೈದ್ಯರ ಸಲಹೆ ಪಡೆದುಕೊಳ್ಳಿ.
ಕರ್ಕಾಟಕ
ಯೋಜನೆಗಳಲ್ಲಿನ ಜಟಿಲ ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮುಂದುವರಿದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವಿರಿ. ನಿರೀಕ್ಷೆಗಳು ಹಿತ ಮತ್ತು ಮಿತವಾಗಿದ್ದರೆ ಕೆಲಸ ಸುಸೂತ್ರವಾಗಿ ನೆರವೇರುವುದು.
ಸಿಂಹ
ಉತ್ತಮವಾದ ಪೂರ್ವತಯಾರಿಯೊಂದಿಗೆ ಈಗಿರುವ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕುವುದು ಸರಿಯಾದ ತೀರ್ಮಾನವಾಗಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ತೃಪ್ತಿಕರ ಆದಾಯವಿದೆ.
ಕನ್ಯಾ
ವ್ಯವಹಾರದಲ್ಲಿ ಪ್ರಾಮಾಣಿಕವಾಗಿ ದುಡಿಮೆ ಮಾಡುವುದು ಕಷ್ಟಕರ ಎಂದೆನಿಸಿದರೂ ಅದನ್ನು ಆಚರಿಸುವುದರಿಂದ ಮನಃಶಾಂತಿ ಇರಲಿದೆ. ಕೌಟುಂಬಿಕ ಸಮಸ್ಯೆಗಳು ಹೊಸದೊಂದು ಆಯಾಮ ಪಡೆಯಲಿದೆ.
ತುಲಾ
ಹೆಚ್ಚುವರಿ ವರಮಾನದ ಮೂಲವನ್ನು ಹುಡುಕುವ ಪ್ರಯತ್ನವನ್ನು ಮಾಡಿರಿ. ಮನೆಯಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಹೊಣೆಗಾರಿಕೆ ನಿಮ್ಮದಾಗಿರುತ್ತದೆ. ಸ್ನೇಹಗಳು ನೂತನ ಸಂಬಂಧಗಳಿಗೆ ದಾರಿಯಾಗಲಿದೆ.
ವೃಶ್ಚಿಕ
ಸಮಾಜದಲ್ಲಿನ ನಿಮ್ಮ ಮುಂದಾಳತ್ವಕ್ಕೆ ಜನ ನಿಮ್ಮನ್ನು ಇಷ್ಟಪಟ್ಟು ನಿಮ್ಮ ಸಲಹೆಯನ್ನು ಕೇಳುವರು. ನೀವು ಹಿರಿಯರು ಹೇಳಿದಂತೆ ದೂರದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿತುಕೊಳ್ಳಿರಿ.
ಧನು
ಆದಾಯದಲ್ಲಿ ಅಭಿವೃದ್ಧಿ ತೋರಿಬಂದು ಧಾರ್ಮಿಕ ಅಥವಾ ಪುಣ್ಯಕಾರ್ಯಗಳನ್ನು ಮಾಡುವುದರ ಬಗ್ಗೆ ಮನಸ್ಸಾಗುವುದು. ಬುದ್ಧಿವಂತಿಕೆಯಿಂದ ಬೆಟ್ಟದಂತಹ ಸಮಸ್ಯೆಗಳು ಪರಿಹಾರ ಕಾಣಲಿವೆ. ಹಣದ ಚಿಂತೆ ಇರುವುದಿಲ್ಲ.
ಮಕರ
ಅರಿತುಕೊಳ್ಳುವ ಸತ್ಯ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಸರಿಯಾದ ಮಾರ್ಗದರ್ಶನ ದೊರೆಯಲಿದೆ. ಆಸ್ತಿ ವಿಷಯಗಳು ನಿರಾತಂಕವಾಗಿ ಬಗೆಹರಿಯುವುದು.
ಕುಂಭ
ಅಶಾಂತಿಯ ವಾತಾವರಣದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ತಾಳ್ಮೆ ಈ ದಿನದ ಮೂಲಮಂತ್ರವಾಗಲಿದೆ. ಯಾವುದೇ ವಿಚಾರದಲ್ಲಾದರೂ ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆ ಮುಖ್ಯ.
ಮೀನ
ಹಣಕಾಸು ತಜ್ಞರ ಸಲಹೆ ಮೇರೆಗೆ ದೀರ್ಘಕಾಲೀನ ಯೋಜನೆಯನ್ನು ರೂಪಿಸುವುದು ಉತ್ತಮ. ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವಿರಿ. ಸಣ್ಣ ಪುಟ್ಟ ಸಾಲದ ಹಣ ಹಿಂದಿರುಗುವುದು.