ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯವರು ಎದುರಾಗುವ ಸವಾಲುಗಳನ್ನು ಬುದ್ದಿವಂತಿಕೆಯಿಂದ ಎದುರಿಸಿ
Published 24 ಡಿಸೆಂಬರ್ 2023, 23:41 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಹೋರಾಟದ ಬದುಕಿನಲ್ಲಿ ಇಂದು ಹೊಸ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳಬೇಕಾಗುವುದು. ನಿರುದ್ಯೋಗಿಗಳಿಗೆ ಸುಲಭವಾಗಿ ಉದ್ಯೋಗ ದೊರೆಯಲಿದೆ. ಕಾಗದದ ಉದ್ಯಮದವರಿಗೆ ಅಧಿಕ ಲಾಭ ಉಂಟಾಗಲಿದೆ.
ವೃಷಭ
ಮನೆಯಲ್ಲಿ ನೆಡೆಯಬೇಕಿರುವ ಮಂಗಳ ಕಾರ್ಯಗಳ ಬಗ್ಗೆ ಕೆಲವು ತೀರ್ಮಾನ ತೆಗೆದುಕೊಳ್ಳುಲು ಸುದಿನ. ಆಹಾರ ಸೇವಿಸಲು ಸಂಕೋಚವನ್ನು ಮಾಡಿಕೊಳ್ಳಬೇಡಿ. ವ್ಯವಸಾಯಗಾರರಿಗೆ ಹೆಚ್ಚಿನ ಕೆಲಸ ಪ್ರಾರಂಭವಾಗುವುದು.
ಮಿಥುನ
ಪ್ರಯಾಣ ಮತ್ತು ಹೊಸಬರ ಪರಿಚಯ ನಿಮ್ಮ ಮುಂದಿನ ಯೋಜನೆಗಳಿಗೆ ಅನುಕೂಲಕರವಾಗಲಿದೆ. ಜೀವನೋಪಾಯಕ್ಕೆ ಪರ್ಯಾಯ ಮಾರ್ಗವೊಂದನ್ನು ಹುಡುಕುವ ಪ್ರಯತ್ನವನ್ನು ಮಾಡಿ. ಕೆಲಸವು ವಿಳಂಬವಾಗಿ ನೆರೆವೇರುವುದು.
ಕರ್ಕಾಟಕ
ಮನದಲ್ಲಿ ಸಲ್ಲದ ವಿಚಾರಗಳನ್ನು ತುಂಬಿಕೊಳ್ಳದೇ, ಸಂತೋಷಮಯವಾಗಿ ಇರಲು ಯತ್ನಿಸಿ. ಉಸಿರಾಟದ ಸಮಸ್ಯೆ ಎದುರಾಗಬಹುದು, ನಿರ್ಲಕ್ಷಿಸಬೇಡಿ. ವಿದ್ಯುತ್ ಉಪಕರಣಗಳ ಮಾರಾಟಗಾರರಿಗೆ ಶುಭಕಾಲ.
ಸಿಂಹ
ನವ ಉದ್ಯಮಿಗಳಿಗೆ ಹಿರಿಯರಿಂದ ತಿಳುವಳಿಕೆಯ ಮಾತುಗಳು, ಆಶೀರ್ವಾದವು ಪ್ರಾಪ್ತಿಯಾಗುವುದು. ಧಾರ್ಮಿಕ ಕಾರ್ಯದಿಂದ ದೊರಕುವ ಸತ್ಫಲಗಳು ಅನುಭವಕ್ಕೆ ಬರಲಿದೆ. ತರಕಾರಿ ವ್ಯಾಪಾರಿಗಳಿಗೆ ಲಾಭ ಉಂಟಾಗುವುದು.
ಕನ್ಯಾ
ಷೇರುಗಳನ್ನು ಕೊಳ್ಳುವಲ್ಲಿ ನಿಮ್ಮ ಲೆಕ್ಕಾಚಾರ ವ್ಯತ್ಯಾಸವಾಗಲಿದೆ, ಗಮನವಿರಲಿ. ನಿಮ್ಮ ಶ್ರಮಕ್ಕೆ ಅನುಗುಣವಾಗಿ ಆರ್ಥಿಕ ಸ್ಥಿತಿಗತಿಗಳು ಉತ್ತಮಗೊಳ್ಳುವುದು. ಬಾಕಿ ಇದ್ದ ಯೋಜನೆಯನ್ನು ಪೂರ್ಣಗೊಳಿಸಿ.
ತುಲಾ
ಗಣ್ಯ ವ್ಯಕ್ತಿಗಳ ಪರಿಚಯ ನಿಮ್ಮ ಸ್ವಂತ ಕೆಲಸವೊಂದಕ್ಕೆ ಸಹಾಯವಾಗುವುದು. ವಾಹನ ಚಾಲನೆಯಲ್ಲಿ ಅಥವಾ ವಾಹನದಲ್ಲಿ ಪ್ರಯಾಣಿಸುವಾಗ ಜಾಗ್ರತರಾಗಿರಿ. ಕೇಸರಿ ಬಣ್ಣ ಶುಭವನ್ನು ಉಂಟುಮಾಡುವುದು.
ವೃಶ್ಚಿಕ
ನೂತನ ಸಂಬಂಧವನ್ನು ಬೆಳೆಸುವ ವಿಚಾರವಾಗಿ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿರುವುದಿಲ್ಲ. ಎಲೆಕ್ಟಿçಕಲ್ ವಸ್ತುಗಳ ವ್ಯಾಪಾರ ಆರಂಭಿಸುವ ಬಗ್ಗೆ ಯೋಚಿಸಬಹುದು. ಟ್ರಾವೆಲ್ ಏಜೆನ್ಸಿಯವರಿಗೆ ಉತ್ತಮ ದಿನಗಳು.
ಧನು
ಸ್ಪರ್ಧಾತ್ಮಕ ವಿಚಾರಗಳಲ್ಲಿ ಪ್ರಬಲರಾದ ಮತ್ತು ಚಾಣಾಕ್ಷರಾದ ಪ್ರತಿಸ್ಪರ್ಧಿಗಳು ಎದುರಾಗುವರು. ಈ ದಿನದ ಕೆಲ ಅಂಶಗಳ ಬಗ್ಗೆ ಗಂಭೀರವಾದ ನಿಲುವು ತಾಳ ಬೇಕಾಗುವುದು. ನೂತನ ವಸ್ತç ಖರೀದಿಯ ಯೋಗವಿದೆ.
ಮಕರ
ನಿಮಗೆ ಎದುರಾಗುವ ಎಲ್ಲಾ ಸವಾಲುಗಳನ್ನು ಬುದ್ದಿವಂತಿಕೆಯಿಂದ ಎದುರಿಸಿ, ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿರಿ. ಚರ್ಮಕ್ಕೆ ಸಂಬಂಧಪಟ್ಟಂತೆ ಅನಾರೋಗ್ಯ ಎದುರಾಗಬಹುದು.
ಕುಂಭ
ಗೊಂದಲದ ಸಮಯದಲ್ಲಿ ಯಾವ ಹಾದಿಯನ್ನು ಆಯ್ದುಕೊಳ್ಳಬೇಕೆಂದು ಖಚಿತವಿಲ್ಲದಿದ್ದರೂ ನೀವು ಮತ್ತೊಂದು ಅವಕಾಶವನ್ನು ಸದಾ ಪರ್ಯಾಯವಾಗಿಟ್ಟುಕೊಳ್ಳುವ ಜಾಣ್ಮೆಯನ್ನು ಪ್ರದರ್ಶಿಸಿ. ಸಂತಾನ ಸುದ್ದಿ ಕೇಳಿ ಬರುವುದು.
ಮೀನ
ಗುತ್ತಿಗೆ ಆಧಾರಿತ ಉದ್ಯೋಗ ನೆಡೆಸುವವರಿಗೆ ಜನಬಲದ ಸಮಸ್ಯೆ ಎದುರಾಗಬಹುದು. ಛಾಯಾಗ್ರಾಹಕರಿಗೆ ಪ್ರಶಸ್ತಿ ಪಡೆಯುವಂತಹ ಹೆಚ್ಚಿನ ಅವಕಾಶಗಳು ಸಿಗಲಿವೆ. ವಿಮರ್ಶಕರಿಗೆ ವೃತ್ತಿಯಲ್ಲಿ ಏಳಿಗೆ ಇರುವುದು.