ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಲಾಭಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡಬೇಡಿ
Published 23 ಜನವರಿ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ನಿಮಗೆ ಮನವರಿಕೆಯಾಗುವುದು. ನಿಮ್ಮ ಲೇಖನಗಳಿಗೆ ತೀಕ್ಷ್ಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಲಾಭಕ್ಕಾಗಿ ಇನ್ನೊಬ್ಬರಿಗೆ ಮೋಸ ಮಾಡಬೇಡಿ.
ವೃಷಭ
ಜೀವನಕ್ಕೆ ಆದರ್ಶಗಳ ಜತೆಗೆ ಹಿರಿಯರ ಅನುಭವ ಸಲಹೆ ಅಳವಡಿಸಿಕೊಳ್ಳುವಿರಿ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಹೆಂಡತಿಯ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು.
ಮಿಥುನ
ಹಿಂದೆ ಕೈಗೊಂಡ ನಿರ್ಧಾರಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ವ್ಯವಹಾರಗಳಲ್ಲಿ ಉತ್ತಮ ಧನಲಾಭ ಕಾಣುವಿರಿ. ಕಾನೂನು ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸು ಲಭಿಸಲಿದೆ.
ಕರ್ಕಾಟಕ
ಜೀವನಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಈ ದಿನ ನಿಮಗಿದೆ. ಹಳೆಯ ವಾಹನ ಮಾರಾಟದ ವಿಷಯ ಕೈಬಿಡುವುದು ಉತ್ತಮ. ಸಂತಾನದ ಶುಭ ಸುದ್ದಿ ಕೇಳಿ ಸಂತಸ ಪಡುವಿರಿ.
ಸಿಂಹ
ಸರಕು ಸಾಗಣೆದಾರರಿಗೆ ಆದಾಯದಲ್ಲಿ ಗಣನೀಯ ಹೆಚ್ಚಳ ಕಂಡು ಬಂದರೂ ಕಾರ್ಯದ ಒತ್ತಡದಿಂದ ವೃತ್ತಿಯಲ್ಲಿ ನಿರಾಶೆಯಾಗುವುದು. ಕಾಫಿ ಬೆಳೆಗಾರರಿಗೆ ಉತ್ತಮ ಆದಾಯವಿದ್ದು, ವರಮಾನದಲ್ಲಿ ಕೊರತೆ ಕಾಣದು.
ಕನ್ಯಾ
ಸರ್ಕಾರಿ ಗುತ್ತಿಗೆ ಕೆಲಸದ ವಿಫುಲ ಅವಕಾಶಗಳು ಒದಗಿ ಬರುವ ಸೂಚನೆ ಕಾಣುವಿರಿ. ಆದಾಯದಲ್ಲಿ ಹೆಚ್ಚಳವಿರುವುದು. ಪತ್ನಿಯೊಂದಿಗೆ ಅಭಿಪ್ರಾಯ ವಿನಿಮಯಗಳಿಂದ ಮನಸ್ಸಿಗೆ ನೆಮ್ಮದಿ ಮೂಡುವುದು.
ತುಲಾ
ತಾಂತ್ರಿಕ ಕ್ಷೇತ್ರದಲ್ಲಿ ಜೀವನ ನಡೆಸುವವರು ಉದ್ಯೋಗದಲ್ಲಿ ದಂಡ ಕಟ್ಟುವ ಸ್ಥಿತಿ ಈ ದಿನ ಎದುರಾಗಬಹುದು ಜಾಗ್ರತೆಯಿಂದ ಕೆಲಸ ಮಾಡಿ. ಉತ್ತಮವಾಗಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸುವಿರಿ.
ವೃಶ್ಚಿಕ
ಅಪರೂಪದ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ. ಕಂಟ್ರಾಕ್ಟ್‌ರಿಗೆ ಬಾಕಿ ಇದ್ದಂತಹ ಹಣ ಕೈಸೇರಲಿದೆ. ಸಂಘ ಸಂಸ್ಥೆಯಲ್ಲಿ ಸ್ಥಾನಮಾನ ಲಭ್ಯವಾಗುವುದು.
ಧನು
ಅವಕಾಶವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ಪ್ರಯತ್ನಪಡುವುದು ಅಗತ್ಯ. ಬರಬೇಕಿದ್ದ ಹಣ ಹಿಂದಿರುಗಿ ಬಂದು ಕೈ ಸೇರಲಿದೆ. ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬೇಡಿ.
ಮಕರ
ಮಾತಿನ ಬುದ್ಧಿವಂತಿಕೆ, ಮಾತಿನ ಚತುರತೆಯಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ತೀಕ್ಷ್ಮವಾದ ಮಾತುಗಳು ಬೇರೆಯವರ ದುಃಖಕ್ಕೆ ಕಾರಣವಾಗದಂತೆ ಗಮನಿಸಿ. ಪರಿಹಾರ ಧನ ಕೈ ಸೇರಲಿದೆ.
ಕುಂಭ
ವಿದ್ಯಾಭ್ಯಾಸದಲ್ಲಿ ಉದಾಸೀನ ತೋರುತ್ತಿದ್ದ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಆಸಕ್ತಿ ಉಂಟಾಗಲಿದೆ. ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಆದಾಯ ಲಭಿಸಲಿದೆ.
ಮೀನ
ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಜನರ ಸಂಪರ್ಕವು ಧನಲಾಭ ತರಲಿದೆ. ವೈಯಕ್ತಿಕ ಜೀವನದ ಸಮಸ್ಯೆಗಳು ಬಗೆಹರಿದು ಮನಸ್ಸಿಗೆ ನೆಮ್ಮದಿ ಮೂಡಲಿದೆ. ಕುಲದೇವರ ಸೇವೆಯಿಂದ ಹೆಚ್ಚಿನ ಫಲ ಲಭಿಸಲಿದೆ.