ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಾತೃವರ್ಗದವರಿಂದ ನೆರವು ಸಿಕ್ಕಿ ಅನ್ಯರಲ್ಲಿನ ಋಣ ಪರಿಹಾರವಾಗಲಿದೆ.
Published 10 ಫೆಬ್ರುವರಿ 2024, 18:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉತ್ತಮ ಸಂತಾನ ಪ್ರಾಪ್ತಿಯಾಗಲಿದ್ದು, ಸಂತೃಪ್ತ ಜೀವನ ನಡೆಸುವಿರಿ. ತತ್ವ ಆದರ್ಶಗಳ ಜೊತೆಗೆ ಹಿರಿಯರ ಅನುಭವ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಿರಿ. ನಿಮ್ಮ ಸ್ಥಾನಮಾನದ ಬಗ್ಗೆ ನಿಮಗೆ ಅರಿವಿರಲಿ.
ವೃಷಭ
ಪಶುಸಂಗೋಪನೆ ಮಾಡುವವರಿಗೆ ಮನೆಯಲ್ಲಿ ಶಾಂತ ವಾತಾವರಣ ವಿದ್ದು ಮನಸ್ಸಿಗೆ ತುಸು ನೆಮ್ಮದಿ ಬರುವುದು. ದಿನಬಳಕೆಯ ವಸ್ತುಗಳ ಅಥವಾ ಉಡುಗೊರೆಯ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ.
ಮಿಥುನ
ವಿದ್ಯಾಭ್ಯಾಸದಲ್ಲಿ ಉದಾಸೀನತೆ ತೋರಿದರೆ ಅನಿವಾರ್ಯವಾಗಿ ಹಿನ್ನಡೆ ಎದುರಿಸಬೇಕಾಗುವುದು. ಲೋಹ, ಪ್ಲಾಸ್ಟಿಕ್ ವಸ್ತುಗಳ ವ್ಯಾಪಾರ ನಡೆಸುವವರಿಗೆ ವ್ಯವಹಾರದಲ್ಲಿ ಲಾಭ ಇರಲಿದೆ.
ಕರ್ಕಾಟಕ
ಇತರರಿಂದಾಗಿ ನಿಮ್ಮ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ. ಸಾಮಾಜಿಕ ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು.
ಸಿಂಹ
ನಿಮ್ಮ ಮನೋಭಿಲಾಷೆಗೆ ಕುಟುಂಬ ವರ್ಗದವರು ಅಭಿವೃದ್ಧಿ ದಾರಿಯನ್ನು ಕಲ್ಪಿಸುವರು. ವಾಹನ ಸಂಚಾರದಲ್ಲಿ ಮಿತ ವೇಗ ಅಗತ್ಯ. ದಾಂಪತ್ಯದಲ್ಲಿರುವ ಬಿರುಕು ಹೊಂದಾಣಿಕೆಯಿಂದ ಸರಿಯಾಗುವುದು.
ಕನ್ಯಾ
ಸಹೋದ್ಯೋಗಿಗಳಲ್ಲಿ ಗೌರವಾನ್ವಿತವಾಗಿ ವರ್ತಿಸುವುದರಿಂದ ನಿಮ್ಮ ಕೆಲಸಗಳು ಸರಾಗವಾಗಿ ಸಾಗಲಿದೆ. ನಿಮ್ಮ ಸಮಯೋಚಿತವಾದ ಬುದ್ಧಿಶಕ್ತಿಯು ಸಂಕಟಗಳನ್ನು ದೂರ ಮಾಡಲಿದೆ. ಸ್ನೇಹಿತರಲ್ಲಿ ವಿಶ್ವಾಸ ವೃದ್ಧಿಯಾಗುವುದು.
ತುಲಾ
ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳದ ಹುಡುಕಾಟದ ಕೆಲಸ ಆರಂಭಿಸುವಿರಿ. ಗಾಯನ ಅಥವಾ ಅಭಿನಯ ಕಲಿಯಲು ಆಸಕ್ತಿ ಉಂಟಾಗುವುದು. ಕಟ್ಟಡದ ಕೆಲಸಗಳು ಪೂರ್ಣಗೊಳ್ಳುವವು.
ವೃಶ್ಚಿಕ
ಗುರಿ ಮುಟ್ಟುವತ್ತ ನಿಮ್ಮ ಹಾದಿಯನ್ನು ಮತ್ತೊಮ್ಮೆ ಪರಿಶೀಲಿಸಿದರೆ ಯೋಜನೆಗಳು ನೀವು ಆಲೋಚಿಸಿದಕ್ಕಿಂತಲೂ ಹೆಚ್ಚು ಪ್ರಾಯೋಗಿಕವಾಗಿರುವವು. ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.
ಧನು
ಮಾತೃವರ್ಗದವರಿಂದ ಆಯಾಚಿತವಾಗಿ ನೆರವು ಸಿಕ್ಕಿ ಅನ್ಯರಲ್ಲಿನ ಋಣ ಪರಿಹಾರವಾಗಲಿದೆ. ನಿವೃತ್ತಿಯ ನಂತರದ ಕೆಲಸಗಳ ಬಗ್ಗೆ ಹೆಂಡತಿಯೊಡನೆ ಚರ್ಚೆ ನಡೆಸುವಿರಿ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುತ್ತದೆ.
ಮಕರ
ವೈದ್ಯರು ನೀಡಿದ ಸಲಹೆಯನ್ನು ಚಾಚೂ ತಪ್ಪದೆ ಆಚರಿಸುವುದರಿಂದ ಆರೋಗ್ಯವನ್ನು ಹಿಡಿತದಲ್ಲಿ ಇರಿಸಿಕೊಳ್ಳಬಹುದು. ಗುತ್ತಿಗೆದಾರರಿಂದ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಂತಾಗುವುದು.
ಕುಂಭ
ನೀವು ಹಿಂದೆ ಮಾಡಿದ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ನಿಮ್ಮಲ್ಲಿರುವ ಉದ್ವೇಗ ಹಾಗೂ ಕೆಲ ವೈಮನಸ್ಯಗಳು ದೂರಾಗುವುದು. ಆರೋಗ್ಯದಲ್ಲಿ ಮತ್ತು ಧನವ್ಯಯದಲ್ಲಿ ಗಮನವಿರಲಿ.
ಮೀನ
ಭೂಮಿಯ ಅದರಲ್ಲೂ ಕೃಷಿ ಭೂಮಿಯ ಖರೀದಿ, ಮಾರಾಟದಂತಹ ವ್ಯವಹಾರದಿಂದ ಅಧಿಕ ಲಾಭವಿದೆ. ಹಿಂದಿನ ದಿನಗಳ ಪರಿಶ್ರಮದ ಫಲವನ್ನು ಈ ದಿನ ಪಡೆಯುವ ಸಾಧ್ಯತೆ ಇದೆ. ಮಹಾಗಣಪತಿಯನ್ನು ಪೂಜಿಸಿ.