‘ನೆಡುತೋಪುಗಳು ಮಾತ್ರವಲ್ಲದೆ, ನೈಸರ್ಗಿಕ ಕಾಡುಗಳಲ್ಲಿಯೂ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಸ್ತಾವಿತ ನೀತಿಯು ಒತ್ತು ನೀಡುತ್ತದೆ. ಹಣಕಾಸಿನ ಲಾಭದ ಲೆಕ್ಕಾಚಾರದ ಚೌಕಟ್ಟೇ ಈ ನೀತಿಯ ಹಿಂದೆ ಇದೆ. ಕೈಗಾರಿಕಾ ಬಳಕೆಗೆ ಅರಣ್ಯವನ್ನು ನೀಡುವುದಕ್ಕೆ ಮಹತ್ವ ಕೊಡಲಾಗಿದೆ. ಮಾರುಕಟ್ಟೆ ಆಧರಿತವಾಗಿರುವ ಈ ನೀತಿಯನ್ನು ಯಾರ ಅನುಕೂಲಕ್ಕಾಗಿ ರೂಪಿಸಲಾಗಿದೆ’ ಎಂದು ಈ ಪತ್ರದಲ್ಲಿ ಪ್ರಶ್ನಿಸಲಾಗಿದೆ.